ವೀರಪ್ಪ ಮೊಯ್ಲಿ ಲೇಖನ ಹಿಂಪಡೆದ ದ ಹಿಂದೂ ಪತ್ರಿಕೆ

ಕೇಂದ್ರದ ಮಾಜಿ ಸಚಿವ, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ ``ದ ಹಿಂದೂ'' ಆಂಗ್ಲ ದಿನಪತ್ರಿಕೆಯ ಜೂ.11ರ ಸಂಚಿಕೆಯಲ್ಲಿ...
ಕೇಂದ್ರದ ಮಾಜಿ ಸಚಿವ, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ
ಕೇಂದ್ರದ ಮಾಜಿ ಸಚಿವ, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ
Updated on

ನವದೆಹಲಿ: ಕೇಂದ್ರದ ಮಾಜಿ ಸಚಿವ, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ ``ದ ಹಿಂದೂ'' ಆಂಗ್ಲ ದಿನಪತ್ರಿಕೆಯ ಜೂ.11ರ ಸಂಚಿಕೆಯಲ್ಲಿ ಬರೆದ ಲೇಖನವನ್ನು ಅದರ ಇಂಟರ್ನೆಟ್ ಆವೃತ್ತಿಯಿಂದ ಹಿಂಪಡೆಯಲಾಗಿದೆ.

ಈ ಬಗ್ಗೆ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿ ಹೇಳಿಕೆ ಪ್ರಕಟಿಸಲಾಗಿದೆ. ಪತ್ರಿಕೆಯಲ್ಲಿ ಮೊಯ್ಲಿ ಬರೆದಿರುವ ಲೇಖನ ಕೃತಿಚೌರ್ಯ ಮಾಡಿ ಬರೆದದ್ದಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದೂ ಪತ್ರಿಕೆಯ ಸಂಪಾದಕೀಯ ಮಂಡಳಿ ತಿಳಿಸಿದೆ. `ವೆಲ್ಫೇರ್ ಟು ಪೇಟರ್ನಲಿಸಮ್' ಎಂಬ ಶಿರೋನಾಮೆಯಲ್ಲಿ ಮೊಯ್ಲಿ ಲೇಖನ ಬರೆದಿದ್ದರು. ಮೇ ನಲ್ಲಿ ಲೇಖಕ ಜಿ.ಸಂಪತ್ ಅವರು ಅದೇ ಲೇಖನ ಬರೆದಿದ್ದರು. ಅದು ಅದೇ ತಿಂಗಳ 26ರಂದು ``ದ ಹಿಂದೂ'' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮೊಯ್ಲಿಯವರು ಆ ಲೇಖನದಲ್ಲಿ ಕೊಂಚ ಮಾರ್ಪಾಡು ಮಾಡಿ ಮತ್ತೆ ``ದ ಹಿಂದೂ''ಗೆ ಕಳುಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com