ನೆರಳು ಬಿದ್ದಿದ್ದಕ್ಕೆ ದಲಿತ ಬಾಲಕಿಗೆ ಹಲ್ಲೆ!

ದೇಶದಲ್ಲಿ ಅಸ್ಪೃಶ್ಯತೆಯ ಭೂತ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ...
ನೆರಳು ಬಿದ್ದಿದ್ದಕ್ಕೆ ದಲಿತ ಬಾಲಕಿಗೆ ಹಲ್ಲೆ! (ಸಾಂದರ್ಭಿಕ ಚಿತ್ರ)
ನೆರಳು ಬಿದ್ದಿದ್ದಕ್ಕೆ ದಲಿತ ಬಾಲಕಿಗೆ ಹಲ್ಲೆ! (ಸಾಂದರ್ಭಿಕ ಚಿತ್ರ)

ಛತ್ತರ್‍ಪುರ: ದೇಶದಲ್ಲಿ ಅಸ್ಪೃಶ್ಯತೆಯ ಭೂತ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ಮೇಲ್ವರ್ಗದ ವ್ಯಕ್ತಿಯೊಬ್ಬನ ಮೇಲೆ ದಲಿತ ಬಾಲಕಿಯ ನೆರಳು ಬಿತ್ತು ಎಂಬ ಕಾರಣಕ್ಕಾಗಿ ಎಲ್ಲರೂ ಸೇರಿ ಆ ಬಾಲಕಿ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಛತ್ತರ್‍ಪುರದಲ್ಲಿ ನಡೆದಿದೆ.

ಬಾಲಕಿಯು ನೀರು ತರಲೆಂದು ಗ್ರಾಮದ ನಲ್ಲಿಯ ಬಳಿ ಹೋಗಿದ್ದಾಗ ಅಲ್ಲೇ ಸಾಗುತ್ತಿದ್ದ ಮೇಲ್ಜಾತಿಯ ಪೂರನ್ ಯಾದವ್ ಮೇಲೆ ಈ ಹುಡುಗಿಯ ನೆರಳು ಬಿದ್ದಿದೆ. ಇದರಿಂದ ಕೋಪಗೊಂಡ ಯಾದವ್‍ನ ಕುಟುಂಬ ಸದಸ್ಯರು ಬಾಲಕಿ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಜತೆಗೆ, ಇನ್ನು ಮುಂದೆ ನಲ್ಲಿ ಬಳಿ ಎಲ್ಲಾದರೂ ಕಾಣಸಿಕ್ಕಿದರೆ ಕೊಲೆ ಮಾಡುತ್ತೇವೆ ಎಂಬ ಬೆದರಿಕೆಯನ್ನೂ ಹಾಕಿದ್ದಾರೆ. ಅಲ್ಲದೆ, ಈ ಬಗ್ಗೆ ಪೊಲೀಸರಿಗೆದೂರು ನೀಡಿದರೆ ಸುಮ್ಮನಿರುವುದಿಲ್ಲ ಎಂದೂ ಹೇಳಿದ್ದಾರೆ. ಆದರೆ, ಬಾಲಕಿಯ ತಂದೆಯು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದು, ಆರೋಪಿಗಳ ವಿರುದ್ಧ ಪ್ರಕರಣದಾಖಲಿಸಲಾಗಿದೆ ಎಂದು ಅಲ್ಲಿನ ಎಎಸ್ಪಿ ನೀರಜ್ ಪಾಂಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com