ನೆರಳು ಬಿದ್ದಿದ್ದಕ್ಕೆ ದಲಿತ ಬಾಲಕಿಗೆ ಹಲ್ಲೆ!

ದೇಶದಲ್ಲಿ ಅಸ್ಪೃಶ್ಯತೆಯ ಭೂತ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ...
ನೆರಳು ಬಿದ್ದಿದ್ದಕ್ಕೆ ದಲಿತ ಬಾಲಕಿಗೆ ಹಲ್ಲೆ! (ಸಾಂದರ್ಭಿಕ ಚಿತ್ರ)
ನೆರಳು ಬಿದ್ದಿದ್ದಕ್ಕೆ ದಲಿತ ಬಾಲಕಿಗೆ ಹಲ್ಲೆ! (ಸಾಂದರ್ಭಿಕ ಚಿತ್ರ)
Updated on

ಛತ್ತರ್‍ಪುರ: ದೇಶದಲ್ಲಿ ಅಸ್ಪೃಶ್ಯತೆಯ ಭೂತ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

ಮೇಲ್ವರ್ಗದ ವ್ಯಕ್ತಿಯೊಬ್ಬನ ಮೇಲೆ ದಲಿತ ಬಾಲಕಿಯ ನೆರಳು ಬಿತ್ತು ಎಂಬ ಕಾರಣಕ್ಕಾಗಿ ಎಲ್ಲರೂ ಸೇರಿ ಆ ಬಾಲಕಿ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಛತ್ತರ್‍ಪುರದಲ್ಲಿ ನಡೆದಿದೆ.

ಬಾಲಕಿಯು ನೀರು ತರಲೆಂದು ಗ್ರಾಮದ ನಲ್ಲಿಯ ಬಳಿ ಹೋಗಿದ್ದಾಗ ಅಲ್ಲೇ ಸಾಗುತ್ತಿದ್ದ ಮೇಲ್ಜಾತಿಯ ಪೂರನ್ ಯಾದವ್ ಮೇಲೆ ಈ ಹುಡುಗಿಯ ನೆರಳು ಬಿದ್ದಿದೆ. ಇದರಿಂದ ಕೋಪಗೊಂಡ ಯಾದವ್‍ನ ಕುಟುಂಬ ಸದಸ್ಯರು ಬಾಲಕಿ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಜತೆಗೆ, ಇನ್ನು ಮುಂದೆ ನಲ್ಲಿ ಬಳಿ ಎಲ್ಲಾದರೂ ಕಾಣಸಿಕ್ಕಿದರೆ ಕೊಲೆ ಮಾಡುತ್ತೇವೆ ಎಂಬ ಬೆದರಿಕೆಯನ್ನೂ ಹಾಕಿದ್ದಾರೆ. ಅಲ್ಲದೆ, ಈ ಬಗ್ಗೆ ಪೊಲೀಸರಿಗೆದೂರು ನೀಡಿದರೆ ಸುಮ್ಮನಿರುವುದಿಲ್ಲ ಎಂದೂ ಹೇಳಿದ್ದಾರೆ. ಆದರೆ, ಬಾಲಕಿಯ ತಂದೆಯು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದು, ಆರೋಪಿಗಳ ವಿರುದ್ಧ ಪ್ರಕರಣದಾಖಲಿಸಲಾಗಿದೆ ಎಂದು ಅಲ್ಲಿನ ಎಎಸ್ಪಿ ನೀರಜ್ ಪಾಂಡೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com