ಗಾಜಿಯಾಬಾದ್: ಉತ್ತರಪ್ರದೇಶದ ಭೋಜ್ ಪುರ್ ಗ್ರಾಮದಲ್ಲಿ ಐದು ಮಂದಿ ಮಂಗಳಮುಖಿಯರ ಗುಂಪೊಂದು ಯುವಕನೊಬ್ಬನ ಮರ್ಮಾಂಗ ಕತ್ತರಿಸಿ ಹಾಕಿದ ಘಟನೆ ನಡೆದಿದೆ.
ಮಂಗಳಮುಖಿಯರ ತಂಡದ ಜೊತೆ ಡ್ರಮ್ಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮನೋಜ್ ಎಂಬಾತ ಮಂಗಳಮುಖಿಯರ ದುಷ್ಕೃತ್ಯಕ್ಕೆ ಸಾಕ್ಷಿಯಾಗಿದ್ದಾನೆ.
ಕಳೆದ ರಾತ್ರಿ ಮಂಗಳಮುಖಿಯರು ಒತ್ತಡ ಶಮನಗೊಳಿಸುವ ಔಷಧದ ಜೊತೆ ಮಾದಕ ವಸ್ತು ಸೇರಿಸಿಕೊಟ್ಟು, ಆತನನ್ನು ಸಾಲದ ಹಣ ಕೊಡುವಂತೆ ಒತ್ತಡ ಹಾಕಿದ್ದು, ನಂತರ ಆತನ ಮರ್ಮಾಂಗ ಕತ್ತರಿಸಿ ರಸ್ತೆ ಪಕ್ಕ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ರಕ್ತ ಸ್ರಾವದಿಂದ ಪ್ರಜ್ಞೆ ತಪ್ಪಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಮನೋಜ್ ಕಂಡ ಗಸ್ತು ತಿರುಗುತ್ತಿದ್ದ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
Advertisement