ಮೇಲ್ಜಾತಿ ಹುಡುಗಿಯೊಂದಿಗೆ ಮಾತಾಡಿದ್ದಕ್ಕೆ ದಲಿತ ಇಂಜಿನಿಯರ್ ಹತ್ಯೆ ?

ಮೇಲ್ಜಾತಿಗೆ ಸೇರಿದ ಹುಡುಗಿಯೊಂದಿಗೆ ಮಾತಾಡಿದ್ದಕ್ಕೆ ದಲಿತ ಕುಟುಂಬದ ಎಂಜಿನಿಯರ್ ನನ್ನು ಕೊಂದಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ...
ಶವ ಪತ್ತೆಯಾಗಿದ್ದ ರೈಲ್ವೆ ಹಳಿ
ಶವ ಪತ್ತೆಯಾಗಿದ್ದ ರೈಲ್ವೆ ಹಳಿ

ನಾಮಕ್ಕಲ್, ತಮಿಳುನಾಡು: ಮೇಲ್ಜಾತಿಗೆ ಸೇರಿದ ಹುಡುಗಿಯೊಂದಿಗೆ ಮಾತಾಡಿದ್ದಕ್ಕೆ ದಲಿತ ಕುಟುಂಬದ ಎಂಜಿನಿಯರ್ ನನ್ನು  ಕೊಂದಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ.

ಬುಧವಾರ ಮಧ್ಯಾಹ್ನ ಗೋಕುಲ್ ರಾಜ್ ಎಂಬಾತನ ಶವ  ರೈಲ್ವೆ ಹಳಿಯ ಮೇಲೆ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿರುವ ಆತನ ಪೋಷಕರು ತಮ್ಮ ಮಗ ಮೇಲ್ಜಾತಿಗೆ ಸೇರಿದ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದ. ಆ ಹುಡುಗಿ ಕಡೆಯವರು ತಮ್ಮ ಮಗನನ್ನು ಅಪಹರಿಸಿ ಹತ್ಯೆ ಮಾಡಿ ರೇಲ್ವೆ ಹಳಿ ಮೇಲೆ ಶವ ಬಿಸಾಕಿದ್ದಾರೆಂದು ಆರೋಪಿಸಿದ್ದಾರೆ.

ಸ್ಥಳೀಯ ಮುಖಂಡ ಯುವರಾಜ್ ಎಂಬಾತನ ವಿರುದ್ಧ ಮೃತ ಎಂಜಿನೀಯರ್ ಪೋಷಕರು ದೂರು ದಾಖಲಿಸಿದ್ದಾರೆ. ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಮಕ್ಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

2013 ರಲ್ಲಿಯೂ ತಮಿಳುನಾಡಿನ ಧರ್ಮಪುರಿಯಲ್ಲಿ ಇಂತುಹುದ್ದೇ ಪ್ರಕರಣವೊಂದು ನಡೆದಿತ್ತು. ಕೊಂಗು ವೆಲ್ಲಾಲಾರ್ ಸಮುದಾಯಕ್ಕೆ ಸೇರಿದ ಯುವತಿಯನ್ನು ದಲಿತನಾದ ಇಳವರಸನ್ ಎಂಬಾತ ವಿವಾಹವಾಗಿದ್ದ. ಹುಡುಗಿ ಕುಟುಂಬದವರ ತೀವ್ರ ವಿರೋಧದ ನಡುವೆಯೂ ಈ ಇಬ್ಬರು ಮದುವೆಯಾಗಿದ್ದರು. ಇದಾದ ನಂತರ ಯುವತಿ ತಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದ ಬೆದರಿದ ಯುವತಿ ಇಳವರಸನ್ ಜೊತೆ ಸಂಸಾರ ನಡೆಸದೆ ತಂದೆ ಮನೆಗೆ ವಾಪಸ್ ಆಗಿದ್ದಳು. ತದ ನಂತರ ಇಳವರಸನ್ ಕೂಡ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com