ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಟೀಕಿಸಿದ್ದ ಮಹಾರಾಷ್ಟ್ರ ಶಾಸಕ ರಾಜ್ ಪುರೋಹಿತ್ ಗೆ ಬಿಜೆಪಿ ನೊಟೀಸ್ ನೀಡಿದೆ. ಪ್ರಕರಣ ಸಂಬಂಧ ವಿವರಣೆ ನೀಡುವಂತೆ ನೊಟೀಸ್ ನಲ್ಲಿ ಸೂಚಿಸಿದೆ.
ಬಿಜೆಪಿಯಲ್ಲಿ ಕೇವಲ ಇಬ್ಬರು ಮಾತ್ರ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಳಿದವರು ಅದನ್ನು ಅನುಷ್ಠಾನಗೊಳಿಸುತ್ತಾರೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಸತ್ತು ಹೋಗಿದೆ ಎಂದು ಟೀಕಿಸಿದ್ದ ರಾಜ್ ಪುರೋಹಿತ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಸಹಾಯಕರಾಗಿದ್ದಾರೆ, ರಿಯಲ್ ಎಸ್ಟೇಟ್ ಎಜೆಂಟ್ ಲೋಧಾ ಅವರಿಂದ ಒತ್ತಡಕ್ಕೊಳಗಾಗಿದ್ದಾರೆ, ಎಲ್ಲಾ ಅಧಿಕಾರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಳಿಯೇ ಕೇಂದ್ರೀಕೃತವಾಗಿದೆ ಎಂದು ಆರೋಪಿಸಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಜೊತೆಗೆ ಅಮಿತ್ ಶಾ ವಿರುದ್ಧವೂ ಪುರೋಹಿತ್ ಮಾತನಾಡಿದ್ದರು.
ಮುಂಬೈ ಬಿಜೆಪಿ ಶಾಸಕ ರಾಜ್ ಪುರೋಹಿತ್ ಹೇಳಿರುವ ದೃಶ್ಯವನ್ನು ಮಾರುವೇಷದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿತ್ತು
Advertisement