ಪಕ್ಷದ ವರಿಷ್ಟರಿಗೆ ಶಾಕ್ ನೀಡಿದ ಬಿಜೆಪಿ ಶಾಸಕ

ಪಂಕಜಾ ಮುಂಡೆ ಪ್ರಕರಣದಿಂದ ಸುಧಾರಿಸಿ ಕೊಳ್ಳುತ್ತಿರುವ ಮಹಾರಾಷ್ಟ್ರ ಬಿಜೆಪಿಗೆ ಈಗ ಶಾಸಕ ರಾಜ್ ಪುರೋಹಿತ್ ಶಾಕ್ ನೀಡಿದ್ದಾರೆ...
ಬಿಜೆಪಿ ಶಾಸಕ ರಾಜ್ ಪುರೋಹಿತ್
ಬಿಜೆಪಿ ಶಾಸಕ ರಾಜ್ ಪುರೋಹಿತ್

ಮುಂಬೈ: ಪಂಕಜಾ ಮುಂಡೆ ಪ್ರಕರಣದಿಂದ ಸುಧಾರಿಸಿ ಕೊಳ್ಳುತ್ತಿರುವ ಮಹಾರಾಷ್ಟ್ರ ಬಿಜೆಪಿಗೆ ಈಗ ಶಾಸಕ ರಾಜ್ ಪುರೋಹಿತ್ ಶಾಕ್ ನೀಡಿದ್ದಾರೆ.

ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕುರಿತು ಪುರೋಹಿತ್ ನೀಡಿರುವ ಟೀಕೆ ಭಾರಿ ವಿವಾದ ಎಬ್ಬಿಸಿದೆ. ಇದರಿಂದ ಆಕ್ರೋಶಗೊಂಡಿರುವ ಬಿಜೆಪಿ, ಪುರೋಹಿತ್‍ಗೆ ನೋಟಿಸ್ ಜಾರಿ ಮಾಡಿದೆ.

ಮೋದಿ, ಶಾ ಅವರಲ್ಲಷ್ಟೇ ಅಧಿಕಾರ ಕೇಂದ್ರೀ ಕೃತವಾಗಿದೆ. ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ. ಜನ ಸಮಗ್ರ ನಾಯಕತ್ವದ ಕುರಿತು ಮಾತನಾಡುತ್ತಾರೆ. ಆದರೆ ಅದು ಹುಡುಕಿದರೂ ಕಾಣುತ್ತಿಲ್ಲ. ಇದು ಪಕ್ಷದ ಪಾಲಿಗೆ ಆತಂಕದ ವಿಚಾರ ಎಂದು ಪುರೋಹಿತ್ ಹೇಳಿದ್ದಾರೆ. ಈ ಕುರಿತು ಕುಟುಕು ಕಾರ್ಯಾಚರಣೆ ನಡೆಸಿ ಬಿಡುಗಡೆ ಮಾಡಲಾಗಿರುವ ವಿಡಿಯೋ ತುಣುಕೊಂದು ಈಗ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com