ನವದೆಹಲಿ: ಜೂನ್ 4 ರಂದು ಮಣಿಪುರದ ಚಾಂದೇಲ್ ಜಿಲ್ಲೆಯಲ್ಲಿ ನಡೆದಿದ್ದ ಯೋಧರ ಹತ್ಯಾಕಾಂಡ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ತಂಡ, ಎನ್ ಎಸ್ ಸಿಎನ್ (ಕೆ) ಮುಖ್ಯಸ್ಥನನ್ನು ಬಂಧಿಸಿದೆ.ಮಣಿಪುರದ ಚಾಂದೇಲ್ ಜಿಲ್ಲೆಯಲ್ಲಿ ಸಂಘಟನೆಯ ಮುಖ್ಯಸ್ಥನಾದ ಕುಮ್ಲೋ ಅಬಿನ ಅನಾಲ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ತನಿಖಾ ತಂಡ ತಿಳಿಸಿದೆ.
ಪ್ರಕರಣದ ಪ್ರಮುಖ ರೂವಾರಿ ಈತ ಎಂಬುದಾಗಿ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಜೂನ್ 4ರಂದು ಡೋಗ್ರಾ ರೆಜಿಮೆಂಟ್ ಯೋಧರ ಮೇಲೆ ನಡೆದ ದಾಳಿಯಲ್ಲಿ 18 ಸೈನಿಕರು ಮೃತ ಪಟ್ಟಿದ್ದರು.
Advertisement