ಸಚಿವ ಶ್ರೀಪಾದ ನಾಯಕ್ ಮನೆ ಕೆಲಸದಾಕೆ ಹತ್ಯೆ

ಕೇಂದ್ರದ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಗೋವಾ ನಿವಾಸದಲ್ಲಿ ಮನೆಗೆಲಸಕ್ಕಿದ್ದ ಕರ್ನಾಟಕ ಮೂಲದ ಮಹಿಳೆಯೊಬ್ಬರು ಹತ್ಯೆಗೀಡಾಗಿದ್ದಾರೆ...
ಶ್ರೀಪಾದ್ ನಾಯಕ್
ಶ್ರೀಪಾದ್ ನಾಯಕ್
Updated on

ಪಣಜಿ: ಕೇಂದ್ರದ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಗೋವಾ ನಿವಾಸದಲ್ಲಿ ಮನೆಗೆಲಸಕ್ಕಿದ್ದ ಕರ್ನಾಟಕ ಮೂಲದ ಮಹಿಳೆಯೊಬ್ಬರು ಹತ್ಯೆಗೀಡಾಗಿದ್ದಾರೆ. ಬಾಗಲಕೋಟೆಯ ಚಾರು ರಾಥೋಡ್ ಮೃತ ಮಹಿಳೆ.

ವಿಧವೆಯಾಗಿರುವ ಚಾರು ಅವರು ಇಪ್ಪತ್ತು ವರ್ಷದಿಂದ ಗೋವಾದಲ್ಲೇ ಇದ್ದರು. ಭಾನುವಾರ ರಾತ್ರಿ ಅವರು ಮನೆಗೆ ಹಿಂತಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರ ಮೈಮೇಲೆ ಇದ್ದ ಆಭರಣ ಹಾಗೂ ಮೊಬೈಲ್ ಫೋನ್ ನಾಪತ್ತೆಯಾಗಿದೆ. ಕೊಲೆಯ ಹಿಂದೆ ರಾಮಣ್ಣ ಎನ್ನುವ ವ್ಯಕ್ತಿ ಕೈವಾಡ ಇರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com