ಈ ಮೊದಲು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ, ``ಮೋದಿ ಸರ್ಕಾರ 1984ರ ಗಲಭೆಯನ್ನು ಬೇಕೆಂದೇ ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಆದ್ದರಿಂದ ನಾವೇ ಮುನ್ನುಗುವುದು ತನಿಖೆಗೆ ಚಾಲನೆ ನೀಡುವುದು ಅನಿವಾರ್ಯವಾಗಿದೆ'' ಎಂದು ಗುಡುಗಿತು.