ಅಂತೆಯೇ ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ , ದೇನಾ ಬ್ಯಾಂಕ್ ಸಂಸ್ಥಾಪಕ ದೇವಕರಣ್ ನಂಜಿ ಮತ್ತಿತರರ ಜೀವನ ಚರಿತ್ರೆಗಳನ್ನು ಪಠ್ಯಾಂಶಗಳನ್ನಾಗಿಸಲು ಗುಜರಾತ್ ಸರ್ಕಾರ ಯೋಜಿಸಿದೆ. 9 ರಿಂದ 12ನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಪಠ್ಯಾಂಶವಾಗಿಸಲು ಹಾಗೂ 6 ರಿಂದ 8ನೇ ತರಗತಿವರೆಗೆ ಜನರಲ್ ನಾಲೆಡ್ಜ್ ಪುಸ್ತಕಗಳಲ್ಲಿ ಧೀರೂಭಾಯ್ ಹಾಗೂ ದೇವಕರಣ್ ನಂಜಿ ಕುರಿತ ಜೀವನವನ್ನು ಪಠ್ಯಾಂಶವಾಗಿಸಲು ಗುಜರಾತ್ ರಾಜ್ಯದ ಸ್ಕೂಲ್ ಟೆಕ್ಸ್ಟ್ ಬುಕ್ ಬೋರ್ಡ್ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.