ಸೈಯ್ಯದ್ ಅಲಿ ಶಾ ಗಿಲಾನಿ (ಸಂಗ್ರಹ ಚಿತ್ರ)
ದೇಶ
ಜಮ್ಮು-ಕಾಶ್ಮೀರ ಭಾರತದ ಅಂಗವಲ್ಲ..!
ಜಮ್ಮು ಮತ್ತು ಕಾಶ್ಮೀರವು ವಿವಾದಿತ ಪ್ರದೇಶ. ಅದು ಭಾರತದ ಭಾಗವಲ್ಲ. ಹೀಗೆಂದು ಹೇಳಿರುವುದು ಹುರಿಯತ್ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ...
ಜಮ್ಮು ಮತ್ತು ಕಾಶ್ಮೀರವು ವಿವಾದಿತ ಪ್ರದೇಶ. ಅದು ಭಾರತದ ಭಾಗವಲ್ಲ. ಹೀಗೆಂದು ಹೇಳಿರುವುದು ಹುರಿಯತ್ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ.
ಹಿಂದಿನಿಂದಲೇ ಪಾಕಿಸ್ತಾನದತ್ತ ಒಲವು ಹೊಂದಿರುವ ಗಿಲಾನಿ ಈ ಹೇಳಿಕೆ ನೀಡುವ ಮೂಲಕ ತನ್ನ ಉದ್ಧಟತನ ಪ್ರದರ್ಶಿಸಿದ್ದಾರೆ. ಸೋಮವಾರವಷ್ಟೇ ಅವರು ಪಾಕಿಸ್ತಾನದ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಮಂಗಳವಾರ ಮಾತನಾಡಿದ ಗಿಲಾನಿ, ಸಿಎಂ ಸಯೀದ್ ಹುರಿಯತ್ ಅನ್ನು ಶ್ಲಾಘಿಸಿರುವುದು `ರಾಜಕೀಯ ಸ್ಟಂಟ್' ಅಷ್ಟೆ. ಯಾವ ಪಕ್ಷವೇ ಅಧಿಕಾರದಲ್ಲಿರಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ಜತೆಗೆ, ಆಲಂ ವಿರುದ್ಧ ಹೊರಿಸಿರುವ ಆರೋಪಗಳೆಲ್ಲ ಸುಳ್ಳು ಎಂದೂ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ