ಅರವಿಂದ್ ಕೇಜ್ರಿವಾಲ್,
ಅರವಿಂದ್ ಕೇಜ್ರಿವಾಲ್,

ಮುಂದಿನ ವಾರ ಎಎಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ, ಕೇಜ್ರಿವಾಲ್ ಗೈರು ಸಾಧ್ಯತೆ

Published on

ನವದೆಹಲಿ: ಆಂತರಿಕ ಭಿನ್ನಾಭಿಪ್ರಾಯದಿಂದ ಬಳಲುತ್ತಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮುಂದಿನ ವಾರ ನಡೆಯಲಿದ್ದು, ಈ ಸಭೆಗೆ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗೈರು ಆಗುವ ಸಾಧ್ಯತೆ ಇದೆ.

ಇದೇ ಮಾರ್ಚ್ 28ರಂದು ಪಕ್ಷದ ರಾಷ್ಟ್ರೀಯ ಸಮಿತಿ ಸಭೆ ನಿಗದಿಯಾಗಿದ್ದು, ಈ ಸಭೆಯ ಅಜೆಂಡ ಅಂತಿಮಗೊಳಿಸಲು ಕಾರ್ಯಕಾರಣಿ ಸಭೆ ಕರೆಯಲಾಗಿದೆ.

ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದ್ ಸೇರಿದಂತೆ ಪ್ರಮುಖ 21 ನಾಯಕರನ್ನೊಳಗೊಂಡ ಕಾರ್ಯಕಾರಣಿ ಸಭೆ ಈ ವಾರದ ಮಧ್ಯದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಈ ಸಭೆಗೆ ಕೇಜ್ರಿವಾಲ್ ಅವರು ಹಾಜರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಶಮನ ಮಾಡಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ರಾಜಿ ಪ್ರಯತ್ನಗಳು ಯಶಸ್ವಿಯಾದರೆ ಮಾತ್ರ ಕಾರ್ಯಕಾರಣಿ ಸಭೆ ಸುಗಮವಾಗಿ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com