ಮುಂದಿನ ವಾರ ಎಎಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ, ಕೇಜ್ರಿವಾಲ್ ಗೈರು ಸಾಧ್ಯತೆ

ಅರವಿಂದ್ ಕೇಜ್ರಿವಾಲ್,
ಅರವಿಂದ್ ಕೇಜ್ರಿವಾಲ್,

ನವದೆಹಲಿ: ಆಂತರಿಕ ಭಿನ್ನಾಭಿಪ್ರಾಯದಿಂದ ಬಳಲುತ್ತಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮುಂದಿನ ವಾರ ನಡೆಯಲಿದ್ದು, ಈ ಸಭೆಗೆ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗೈರು ಆಗುವ ಸಾಧ್ಯತೆ ಇದೆ.

ಇದೇ ಮಾರ್ಚ್ 28ರಂದು ಪಕ್ಷದ ರಾಷ್ಟ್ರೀಯ ಸಮಿತಿ ಸಭೆ ನಿಗದಿಯಾಗಿದ್ದು, ಈ ಸಭೆಯ ಅಜೆಂಡ ಅಂತಿಮಗೊಳಿಸಲು ಕಾರ್ಯಕಾರಣಿ ಸಭೆ ಕರೆಯಲಾಗಿದೆ.

ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದ್ ಸೇರಿದಂತೆ ಪ್ರಮುಖ 21 ನಾಯಕರನ್ನೊಳಗೊಂಡ ಕಾರ್ಯಕಾರಣಿ ಸಭೆ ಈ ವಾರದ ಮಧ್ಯದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಈ ಸಭೆಗೆ ಕೇಜ್ರಿವಾಲ್ ಅವರು ಹಾಜರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಶಮನ ಮಾಡಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ರಾಜಿ ಪ್ರಯತ್ನಗಳು ಯಶಸ್ವಿಯಾದರೆ ಮಾತ್ರ ಕಾರ್ಯಕಾರಣಿ ಸಭೆ ಸುಗಮವಾಗಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com