ತಮಿಳುನಾಡಿನ 29 ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಪಡೆ

ಶ್ರೀಲಂಕಾದ ಜಲಪರಿಧಿಗೆ ಅಕ್ರಮವಾಗಿ ನುಸುಳಿದ ಆರೋಪದಲ್ಲಿ ತಮಿಳುನಾಡಿನ 29 ಮೀನುಗಾರ­ರನ್ನು ಶ್ರೀಲಂಕಾ ನೌಕಾ ದಳ ಶನಿವಾರ ಬಂಧಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಮೇಶ್ವರಂ: ಶ್ರೀಲಂಕಾದ ಜಲಪರಿಧಿಗೆ ಅಕ್ರಮವಾಗಿ ನುಸುಳಿದ ಆರೋಪದಲ್ಲಿ ತಮಿಳುನಾಡಿನ 29 ಮೀನುಗಾರ­ರನ್ನು ಶ್ರೀಲಂಕಾ ನೌಕಾ ದಳ ಶನಿವಾರ ಬಂಧಿಸಿದೆ.

ಬಂಧಿತ ಮೀನುಗಾರರು ಜಲಸಂಧಿಯ ಬಳಿಯಿರುವ ಕಟ್ಚಾತೀವು ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಶ್ರೀಲಂಕಾ ನೌಕೌ ಪಡೆ ಸಿಬ್ಬಂದಿ ಅವರನ್ನು ಬಂಧಿಸಿದ್ದು, ಐದು ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಮೀನುಗಾರರನ್ನು ಮನ್ನಾರ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದೆಂದು ಮೂಲಗಳು ತಿಳಿಸಿವೆ. ಕಟ್ಚಾತೀವು 1974 ರಲ್ಲಿ ಭಾರತವು ಶ್ರೀಲಂಕಕ್ಕೆ ನೀಡಿದ ಕಿರುದ್ವೀಪವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com