ಹಿಂಸಾಚಾರ ಆರೋಪ: ಶಾಸಕ ಸೇರಿ 2000 ಮಂದಿ ವಿರುದ್ಧ ಕೇಸ್

ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಮೇಲೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ನಹೀದ್ ಹಸನ್ ....
ನಹೀದ್ ಹಸನ್
ನಹೀದ್ ಹಸನ್

ಮುಜಾಫರ್ನಗರ್: ಹಿಂಸಾಚಾರಕ್ಕೆಪ್ರಚೋದನೆ ನೀಡಿದ ಆರೋಪ ಮೇಲೆಉತ್ತರ ಪ್ರದೇಶದ ಸಮಾಜವಾದಿ ಪಕ್ಷದಶಾಸಕ ನಹೀದ್ ಹಸನ್ ಸೇರಿದಂತೆ2000 ಮಂದಿವಿರುದ್ಧ ಪೊಲೀಸರು ದೂರುದಾಖಲಿಸಿದ್ದಾರೆ.

ದೆಹಲಿ-ಕಾಂದ್ಲಾರೈಲಿನಲ್ಲಿ ಐದು ಜನರ ಗುಂಪೊಂದುವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದನ್ನುವಿರೋಧಿಸಿ ಮೇ 1ರಂದುಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಕಾಂದ್ಲಾ ರೈಲ್ವೆ ನಿಲ್ದಾಣದಲ್ಲಿಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಪ್ರತಿಭಟನೆಹಿಂಸಾಚಾರಕ್ಕೆ ತಿರುಗಿತು.ಈ ವೇಳೆ ಪೊಲೀಸ್ಠಾಣೆಗೆ ಬೀಗ ಜಡಿದ ಗಲಭೆಕೋರರುಠಾಣೆ ಹಾಗೂ ಪೊಲೀಸ್ ವಾಹನಗಳ ಮೇಲೆಕಲ್ಲು ತೂರಾಟ ನಡೆಸಿದ್ದರು.ಇದರಿಂದ 16ಪೊಲೀಸ್ ಸಿಬ್ಬಂದಿಗಾಯಗೊಂಡಿದ್ದರು.

ರೈಲ್ವೆಕಾನೂನು 174 ರಪ್ರಕಾರ ರೈಲ್ವೆ ಇಲಾಖೆಗೆ ಸೇರಿದಸ್ವತ್ತುಗಳಿಗೆ ಉಂಟಾದ ನಷ್ಟದಆರೋಪದ ಮೇಲೆ ಶಾಸಕ ನಹೀದ್ ಹಸೇನ್ಸೇರಿ 2000 ಮಂದಿವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com