ಫತೇಹಾಬಾದ್: ಆನೆಗೆ ಮದ ಏರಿದರೆ ಏನಾಗುತ್ತದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಆದರೆ, ಶಾಂತ ಸ್ವಭಾವದ ಒಂಟೆಗೆ ಮದವೇರಿದರೆ ಪರಿಸ್ಥಿತಿ ಎಷ್ಟು ಕ್ರೂರವಾಗಿ ರಬಹುದು ಎನ್ನುವುದಕ್ಕೆ ಉದಾಹರಣೆಯೊಂದಿದೆ.
ಸಿಟ್ಟಿಗೆದ್ದ ಒಂಟೆಯೊಂದು ಇಬ್ಬರು ರೈತರನ್ನು ಬಲಿ ತೆಗೆದುಕೊಂಡಿರುವ ಘಟನೆ ಧಾನಿ ಪ್ರೇಮ್ ನಗರದ ಖಾಬ್ರಾ ಕಲನ್ ಹಳ್ಳಿಯಲ್ಲಿ ನಡೆದಿದೆ.
ಕಾಲಿಗೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡ ಒಂಟೆ, ಸ್ಥಳದಲ್ಲಿದ್ದ ರೈತ ಮಹಿಂದರ್ ಸಿಂಗ್ ರ ಮನೆಗೆ ನುಗ್ಗಿ ದಾಳಿ ಮಾಡಿದೆ. ಒಂಟೆ ದಾಳಿ ತಡೆಯಲು ಬಂದ ಮಹಿಂದರ್ನ ಸಹೋದರನ ಮೇಲೂ ದಾಳಿ ಮಾಡಿದೆ. ಚೀರಾಟದ ಶಬ್ಧ ಕೇಳಿ ಧಾವಿಸಿದ ಸರ್ ಜೀತ್ ಸಿಂಗ್ನನ್ನು ಕಚ್ಚಿ ಹಿಡಿದು ಗೋಡೆಗೆ ಎಸೆದಿದ್ದ ರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Advertisement