ಥಾಣೆ: ಸಹೋದರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಸಹೋದರಿಯ ಮಾವನನ್ನು ಥಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆಸಿದೆ.
ಆರೋಪಿ ದಶರಥ ಠಾಕ್ರೆಯ ಸಹೋದರಿಯನ್ನು ಬದನೇವಾಡಿಗೆ ಮದುವೆ ಮಾಡಿಕೊಡಲಾಗಿತ್ತು. ಸಹೋದರಿಗೆ ಮಾವ ಕಿರುಕುಳ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ವಿಚಾರಿಸಲು ತಮ್ಮ ಇಬ್ಬರು ಸಹೋದರರೊಂದಿಗೆ ಬದನೇವಾಡಿಗೆ ದಶರಥ ಠಾಕ್ರೆ ಬಂದಿದ್ದಾನೆ.
ಈ ವೇಳೆ ಸಹೋದರಿಯ ಮಾವ 56 ವರ್ಷದ ದಾಮೋ ಡಾಗ್ಡೋ ವಾಗ್ ಜತೆ ಮಾತಿಗೆ ಮಾತು ಬೆಳೆದು ದೊಣ್ಣೆಯಿಂದ ಅವರಿಗೆ ಹೊಡೆದಿದ್ದಾನೆ. ಈ ಜಗಳದಲ್ಲಿ ದಾಮೋ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಅಧೀಕ್ಷಕ ಬಚ್ಚನ್ ಸಿಂಗ್ ತಿಳಿಸಿದ್ದಾರೆ.
ಘಟನೆ ಬಳಿಕ ದಶರಥ ಠಾಕ್ರೆ, ಇಬ್ಬರು ಸಹೋದರರಾದ ಕಿಶನ್ ಠಾಕ್ರೆ ಹಾಗೂ ಗುಲಾಬ್ಬಿ ಠಾಕ್ರೆಯನ್ನು ಬಂಧಿಸಿದ್ದು, ಇವರ ವಿರುದ್ಧ ಸೆಕ್ಷನ್ 302, 324, 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement