ಕಳೆದ ತಿಂಗಳು ಮುಂಬೈಯ ಷಣ್ಮುಕಾನಂದ ಹಾಲ್ ನಲ್ಲಿ ಗುಲಾಂ ಅಲಿ ಅವರ ಸಂಗೀತ ಕಚೇರಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಪಾಕ್ ಗಾಯಕನಿಗೆ ಇಲ್ಲಿ ಅವಕಾಶ ನೀಡಲಾರೆವು ಎಂದು ಅಬ್ಬರಿಸಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ , ಆಯೋಜಕರನ್ನು ಭೇಟಿ ಮಾಡಿ ಬೆದರಿಕೆಯನ್ನೊಡ್ಡಿದ್ದರು. ಈ ಹಿನ್ನಲೆಯಲ್ಲಿ ಪ್ರಸ್ತುತ ಸಂಗೀತ ಕಾರ್ಯಕ್ರಮ ರದ್ದುಗೊಂಡಿತ್ತು. ಪಾಕಿಸ್ತಾನದ ಉಗ್ರರು ಭಾರತದ ಮೇಲೆ ದಾಳಿ ನಡೆಸುತ್ತಲೇ ಇರುವಾಗ ಪಾಕ್ ಕಲಾವಿದನಿಗೆ ನಮ್ಮ ಮಣ್ಣಿನಲ್ಲಿ ಕಾರ್ಯಕ್ರಮ ನೀಡಲು ಅವಕಾಶ ನೀಡುವುದಿಲ್ಲ ಎಂಬುದು ಶಿವಸೇನೆಯ ವಾದವಾಗಿದೆ.