ಪಾಟ್ನಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನುನಾಶ ಮಾಡಿ ಬಿಹಾರದಿಂದ ಹೊರ ಹಾಕುತ್ತೇವೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಬಿಹಾರ ಅಂತಿಮ ಹಂತದ ಚುನಾವಣೆ ಮುಗಿದು, ಸಮೀಕ್ಷೆಗಳು ಹೊರಬೀಳುತ್ತಿದ್ದಂತೆಯೇ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಲಾಲೂ ಪ್ರಸಾದ್ ಬಿಹಾರದಲ್ಲಿ ಮಹಾಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುತ್ತದೆ ಎಂದು ಸಮೀಕ್ಷೆಗಳ ವರದಿ ನೀಡಿದೆ. ತಮ್ಮ ಮೈತ್ರಿ ಕೂಟ ಬಿಹಾರದಲ್ಲಿ 190 ಸೀಟುಗಳನ್ನು ಜಯಿಸಲಿದೆ ಎಂದು ಲಾಲೂ ಹೇಳಿದ್ದಾರೆ.
ಬಿಜೆಪಿ ಕೋಮಾದಲ್ಲಿದೆ, ಅದರ ನಾಯಕರು ತುರ್ತು ನಿಗಾ ಘಟಕದಲ್ಲಿದ್ದಾರೆ ಎಂದು ಹೀಗಾಗಿ ಬಿಹಾರದಲ್ಲಿ ತಾವು ರಿಲ್ಯಾಕ್ಸ್ ಆಗಿರುವುದಾಗಿ ಅವರು ತಿಳಿಸಿದ್ದಾರೆ.
Advertisement