ಬಿಜೆಪಿ ಪಾಲಿಗಿದು ಇದು ಪ್ರಮುಖ ಗೆಲುವು ಎಂದು ಭಾವಿಸಬೇಡಿ. ಇದು ತಾತ್ಕಾಲಿಕ ಎಂದು ಅವರು ಹೇಳಿದ್ದಾರೆ. ಜತೆಗೆ, ನಾವು ಎಡವಿದ್ದೆಲ್ಲಿ ಎನ್ನುವುದನ್ನು ಅರಿತುಕೊಳ್ಳಲು ಇದು ಸಕಾಲ ಎಂದಿದ್ದಾರೆ ಚಾಂಡಿ. ಈ ನಡುವೆ ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ ಕೂಡ ಕಾಂಗ್ರೆಸ್ ನೇತೃತ್ವದ ಯುಡಿಫ್ ಮೈತ್ರಿಕೂಟದ ಸೋಲಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಗೆಲುವು ಯುಡಿಎಫ್ ಹಾಗೂ ಎಲ್ಡಿಎಫ್ ಪಾಲಿಗೆ ಎಚ್ಚರಿಕೆಯ ಗಂಟೆ ಎಂದು ಅವರು ತಿಳಿಸಿದ್ದಾರೆ.