ತಮಿಳುನಾಡು ಹಿಂದೂ ಮಹಾಸಭಾದ ಉಪಾಧ್ಯಕ್ಷ ಸುಭಾಷ್ ಸ್ವಾಮಿನಾಥನ್ ಹಾಗೂ ಸೆಂಥಿಲ್ ಕುಮಾರ್, ರಾಜಾ ಎಂಬುವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪಾನಮತ್ತರಾಗಿದ್ದ ಮೂವರು ರಾತ್ರಿ ೧೦ಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಮೊಬೈಲ್ ಮೂಲಕ ಗಗನಸಖಿಯ ಫೊಟೋ ತೆಗೆಯಲು ಹೋದಾಗ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಗಗನ ಸಖಿಯ ಜೊತೆ ಅನುಚಿತವಾಗಿ ವರ್ತಿಸಿ, ಸಹಪ್ರಯಾಣಿಕರು ಮತ್ತು ಪೈಲಟ್ನೊಂದಿಗೂ ಕೈಮಿಲಾಯಿಸಿದ್ದಾರೆ.