ಸ್ವಾಮಿ ವಿರುದ್ಧದ ಅಫಿಡವಿಟ್‍ಗೆ ಕತ್ತರಿ ಹಾಕಿದ ಕೇಂದ್ರ

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸಲ್ಲಿಸಲಾಗಿದ್ದ ಅಫಿಡವಿಟ್ ಗೆ ಮತ್ತೊಮ್ಮೆ ಸರ್ಕಾರ ತಿದ್ದುಪಡಿ ತಂದಿದೆ...
ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)
ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)

ನವದೆಹಲಿ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸಲ್ಲಿಸಲಾಗಿದ್ದ ಅಫಿಡವಿಟ್ ಗೆ ಮತ್ತೊಮ್ಮೆ ಸರ್ಕಾರ ತಿದ್ದುಪಡಿ ತಂದಿದೆ.

ಸ್ವಾಮಿ ತಮ್ಮ ಕೃತಿಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಭಾವನೆ ಕೆರಳಿಸುವಂತಹ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿ ಸರ್ಕಾರ ಸುಪ್ರೀಂಗೆ ಅಫಿಡವಿಟ್  ಸಲ್ಲಿಸಿತ್ತು. ಶುಕ್ರವಾರ ಹೊಸ ಅಫಿಡವಿಟ್ ಸಲ್ಲಿಸಿದ ಸರ್ಕಾರ, ಮೂಲ ಅಫಿಡವಿಟ್‍ನಲ್ಲಿದ್ದ ಒಂದು ಇಡೀ ಪ್ಯಾರಾ ತೆಗೆದುಹಾಕಿದೆ. ಸ್ವಾಮಿ ವಿರುದ್ಧದ ಆರೋಪಗಳ ಬಗ್ಗೆ ತೀರ್ಮಾನ ಕೈಗೊಳ್ಳುವ  ಅಧಿಕಾರವಿರುವುದು ಕೋರ್ಟ್‍ಗೆ. ಹಾಗಾಗಿ, ಪ್ರತಿ ಅಫಿಡವಿಟ್‍ನ 11ನೇ ಪ್ಯಾರಾದಲ್ಲಿರುವ ಅಂಶಗಳನ್ನು ಡಿಲೀಟ್ ಮಾಡಲು ಒಪ್ಪಿಗೆಯಿದೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com