ಕಾಂಗ್ರೆಸ್‍ಗೆ ಐಎಸ್‍ಐ ನಂಟಿದೆ ಎಂದ ಬಾದಲ್

ಕಾಂಗ್ರೆಸ್ ರಾಷ್ಟ್ರವಿರೋಧಿ ಶಕ್ತಿಗಳು, ಉಗ್ರ ಸಂಘಟನೆಗಳ ಜತೆಗೆ ಕೈಜೋಡಿಸುತ್ತಿದೆ. ಹೀಗಾಗಿ ಆ ಪಕ್ಷದ ಮಾನ್ಯತೆ ರದ್ದು ಮಾಡಬೇಕೆಂದು ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಒತ್ತಾಯಿಸಿದ್ದಾರೆ...
ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ (ಸಂಗ್ರಹ ಚಿತ್ರ)
ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಕಾಂಗ್ರೆಸ್ ರಾಷ್ಟ್ರವಿರೋಧಿ ಶಕ್ತಿಗಳು, ಉಗ್ರ ಸಂಘಟನೆಗಳ ಜತೆಗೆ ಕೈಜೋಡಿಸುತ್ತಿದೆ. ಹೀಗಾಗಿ ಆ ಪಕ್ಷದ ಮಾನ್ಯತೆ ರದ್ದು ಮಾಡಬೇಕೆಂದು ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಒತ್ತಾಯಿಸಿದ್ದಾರೆ.

80ರ ದಶಕದ ಭಯೋತ್ಪಾದನೆ, ಸಂಘರ್ಷದಲ್ಲಿ ಸಾವಿ ರಾರು ಪಂಜಾಬಿಗರು ಸಾವಿಗೀಡಾಗಿದ್ದಾರೆ. ಈಗ ಕಾಂಗ್ರೆಸ್ ಆ ವಾತಾವರಣ ಮರು ಸೃಷ್ಟಿಸಲು ಹೊರಟಿದೆ. ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನದ ಐಎಸ್‍ಐ ಜತೆಗೆ ಸಂಪರ್ಕ ಹೊಂದಿ ರುವ ಉಗ್ರ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ಕಾಂಗ್ರೆಸ್ ತನ್ನ ನಿಜ ಬಣ್ಣವನ್ನು ಪ್ರದರ್ಶಿಸುತ್ತಿದೆ.

ಅದೊಂದು ರಾಷ್ಟ್ರ ವಿರೋಧಿ ಪಕ್ಷ ಎಂದು ಬಾದಲ್ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಮೂಲಭೂತವಾದಿಗಳು ಹಾಗೂ ಪ್ರತ್ಯೇಕ ಖಾಲಿಸ್ತಾನಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕವಾದಿ ಗಳ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದಿರುವ ಅವರು, ಈ ಕುರಿತ ವಿಡಿಯೋ ಬಿಡುಗಡೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com