ಆಮಿರ್ ಖಾನ್ ತಮ್ಮ ಮನಸಿನಲ್ಲಿರುವುದನ್ನು ಹೇಳಿದ್ದಾರೆ: ಮಮತಾ

ಅಸಹಿಷ್ಣುತೆ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಆಮಿರ್ ಖಾನ್ ಅವರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ...
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತಾ: ಅಸಹಿಷ್ಣುತೆ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಆಮಿರ್ ಖಾನ್ ಅವರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮಿರ್ ಅವರು ತಮ್ಮ ಮನಸಿನಲ್ಲಿರುವುದನ್ನು ಹೇಳಿದ್ದಾರೆ ಅಷ್ಟೆ ಎಂದಿದ್ದಾರೆ.

ಇಂದು ಮುಸ್ಲಿಂ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಆಮಿರ್ ಖಾನ್ ಅವರು ತಮ್ಮ ಮನಸಿನಲ್ಲಿರುವುದನ್ನು ಹೇಳಿದ್ದಾರೆ. ಅವರಿಗೆ ದೇಶ ಬಿಟ್ಟು ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದರು.

'ಒಬ್ಬ ಭಾರತೀಯನಾಗಿ ಆಮಿರ್ ಖಾನ್ ಅವರು ತಮಗೆ ಅನಿಸಿದ್ದನ್ನು ಹೇಳಿದ್ದಾರೆ. ಅವರಿಗೆ ದೇಶ ಬಿಟ್ಟು ಹೋಗುವಂತೆ ಹೇಳಲು ನೀವು ಯಾರು?' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪ್ರಶ್ನಿಸಿದರು.

'ಇದು ನಮ್ಮ ದೇಶ, ಇದು ಎಲ್ಲರಿಗೂ ಸೇರಿದ್ದು. ಇದೇ ನಮ್ಮ ಜನ್ಮಭೂಮಿ ಮತ್ತು ಕರ್ಮಭೂಮಿಯಾಗಿದ್ದು, ಪಾಕಿಸ್ತಾನಕ್ಕೆ ಹೋಗುವಂತೆ, ಇದನ್ನೇ ಧರಿಸಿ, ಇದನ್ನೇ ತಿನ್ನಿ ಎಂದು ಹೇಳಲು ನೀವು ಯಾರು?' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com