ಆಹಾರ ಭದ್ರತೆಗೆ ಕಾಯ್ದೆ

ಲಘು ಪೋಷಕಾಂಶಗಳ ತೀವ್ರ ಕೊರತೆಯಿಂದಾಗಿ ನವಜಾತ ಶಿಶುಗಳು, ಮಕ್ಕಳು, ಬಾಣಂತಿಯರು ಹಾಗೂ ಹಾಲುಣಿಸುವ ತಾಯಂದಿರು ತೊಂದರೆಗೆ ಸಿಲುಕುತ್ತಿರುವುದನ್ನು ತಪ್ಪಿಸಲು ಆಹಾರ ಭದ್ರತೆ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ...
ಆಹಾರ ಭದ್ರತಾ ಕಾಯ್ದೆ (ಸಂಗ್ರಹ ಚಿತ್ರ)
ಆಹಾರ ಭದ್ರತಾ ಕಾಯ್ದೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಲಘು ಪೋಷಕಾಂಶಗಳ ತೀವ್ರ ಕೊರತೆಯಿಂದಾಗಿ ನವಜಾತ ಶಿಶುಗಳು, ಮಕ್ಕಳು, ಬಾಣಂತಿಯರು ಹಾಗೂ ಹಾಲುಣಿಸುವ ತಾಯಂದಿರು ತೊಂದರೆಗೆ ಸಿಲುಕುತ್ತಿರುವುದನ್ನು ತಪ್ಪಿಸಲು ಆಹಾರ ಭದ್ರತೆ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ.

ಅಪೌಷ್ಠಿಕತೆ ನಿವಾರಣೆಯ ಸದುದ್ದೇಶದ ಈ ಕಾಂಯ್ದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಂಡನೆಯಾಗಲಿದೆ. ಕಬ್ಬಿಣಾಂಶ, ಫಾಲಿಕ ಆ್ಯಸಿಡ್, ಲಘು ಪೋಷಕಾಂಶಗಳು, ವಿಟಾಮಿನ್‍ಗಳ ಕೊರತೆಯನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳು ಕಾಂಯ್ದೆಯಲ್ಲಿರುತ್ತವೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ ಹಾಗೂ ಸಾರ್ವಜನಿಕ  ಪಡಿತರ ವ್ಯವಸ್ಥೆ ಮೂಲಕ ಉದ್ದೇಶಿತ ಕುಟುಂಬಗಳನ್ನು ತಲುಪುವ ವಿಧಾನಗಳನ್ನು ಕಾಂಯ್ದೆ ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com