ಮುಂಬೈ: ರಾಷ್ಟ್ರಗೀತೆಗೆ ಅಗೌರವ ತೋರಿಸಿದರೆ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಮುಂಬೈ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್ ಒಂದರಲ್ಲಿ ರಣ್ಬೀರ್ ಮತ್ತು ದೀಪಿಕಾ ನಟಿಸಿರುವ 'ತಮಾಷಾ' ಸಿನಿಮಾ ನೋಡಲು ಕುಟುಂಬವೊಂದು ಬಂದಿತ್ತು. ಸಿನಿಮಾ ಆರಂಭವಾಗುವ ಮುನ್ನ ರಾಷ್ಟ್ರಗೀತೆ ಮೊಳಗಿದಾಗ ಆ ಕುಟುಂಬ ಮಾತ್ರ ಸೀಟು ಬಿಟ್ಟು ಎದ್ದು ನಿಲ್ಲಲಿಲ್ಲ. ಇನ್ನೇನು ರಾಷ್ಟ್ರಗೀತೆ ಮುಗಿಯುತ್ತಾ ಬಂದಾಗ ಜನರು ಸೀಟು ಬಿಟ್ಟೇಳದ ಆಲಸಿ ಕುಟುಂಬವನ್ನು ನೋಡಿದ್ದು, ಕೂಡಲೇ ಆ ಕುಟುಂಬವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.