ಪಾಕ್ ನಲ್ಲಿರುವ ದಾವೂದ್ ಸದಾ ವಾಸ್ತವ್ಯ ಬದಲಿಸುತ್ತಾನೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ. ಜೊತೆಗೆ ಆತ ಸದಾ ವಾಸ್ತವ್ಯ ಬದಲಿಸುತ್ತಾ ಇರುತ್ತಾನೆ ಎಂದು ಸರ್ಕಾರ ಲೋಕಸಭೆಯಲ್ಲಿ ...
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ. ಜೊತೆಗೆ ಆತ ಸದಾ ವಾಸ್ತವ್ಯ ಬದಲಿಸುತ್ತಾ ಇರುತ್ತಾನೆ ಎಂದು ಸರ್ಕಾರ ಲೋಕಸಭೆಯಲ್ಲಿ ವಿವರಿಸಿದೆ. ಈ ಕುರಿತ ಲಿಖಿತ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಎಚ್.ಪಿ.ಚೌಧರಿ, ವಿವಿಧ ಏಜೆನ್ಸೀಸ್‌ಗಳಿಂದ ದೊರೆತ ಮಾಹಿತಿ ಇದಾಗಿದೆ ಎಂದು ಹೇಳಿದರು.

‘ದಾವೂದ್‌ ಇಬ್ರಾಹಿಂ ವಿರುದ್ಧ ಹೊರಡಿಸಲಾಗಿರುವ ರೆಡ್ ಕಾರ್ನರ್‌ ನೋಟಿಸ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಜಾರಿ ವಿಷಯವಾಗಿ ಪಾಕಿಸ್ತಾನ ಹಾಗೂ ಅದರ ಭದ್ರತಾ ಸಂಸ್ಥೆಗಳು ಅಂತರರಾಷ್ಟ್ರೀಯ ಜವಾಬ್ದಾರಿಗೆ ಬದ್ಧರಾಗಿರುವಂತೆ ವಿವಿಧ ಮಾರ್ಗಗಳ ಮೂಲಕ ಸರ್ಕಾರ ಒತ್ತಡ ಹೇರುವುದನ್ನು ಮುಂದುವರಿಸಲಿದೆ’ ಎಂದರು.

ಈ ಮೊದಲು ಗೃಹ ಸಚಿವ ರಾಜನಾಥ್ ಸಿಂಗ್ ‘ ದಾವೂದ್‌ ಹಸ್ತಾಂತರ ವಿಷಯದಲ್ಲಿ ಭಾರತ ಸರ್ಕಾರ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ’ ಎಂದಿದ್ದರು. ಭಾರತ ಸರ್ಕಾರ ದಾವೂದ್ ನನ್ನು ಭಾರತಕ್ಕೆ ಕರೆತರುವಲ್ಲಿ ಬದ್ದವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com