ಹಿಂದೂಗಳು ಗೋಮಾಂಸ ತಿನ್ನುತ್ತಾರೆ; ಲಾಲೂ ಹೇಳಿಕೆಗೆ ಸ್ಪಷ್ಟನೆ ನೀಡಿ: ಅಮಿತ್ ಶಾ

ಉತ್ತರ ಪ್ರದೇಶದಲ್ಲಿ ಈ ವರೆಗೂ ಗೋಮಾಂಸ ಸೇವನೆ ವಿವಾದ ತಣ್ಣಗಾದಂತಿಲ್ಲ. ನಾಯಕರು ವಿರೋಧ ಪಕ್ಷದ ನಾಯಕರ ನಡುವಿನ ವಾಕ್ಸಮರ ಮುಂದುವರೆಯತ್ತಲೇ ಇದೆ. ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ನೀಡಿದ್ದ ಹೇಳಿಕೆ ಕುರಿತಂತೆ ಬಿಹಾರ ಮುಖ್ಯಮಂತ್ರಿ...
ಚುನಾವಣೆ ಪ್ರಯುಕ್ತ ಬಾಗಲ್ಪುರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಚುನಾವಣೆ ಪ್ರಯುಕ್ತ ಬಾಗಲ್ಪುರ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಲಕ್ಷಿಸರಾಯ್: ಉತ್ತರ ಪ್ರದೇಶದಲ್ಲಿ ಈ ವರೆಗೂ ಗೋಮಾಂಸ ಸೇವನೆ ವಿವಾದ ತಣ್ಣಗಾದಂತಿಲ್ಲ. ನಾಯಕರು ವಿರೋಧ ಪಕ್ಷದ ನಾಯಕರ ನಡುವಿನ ವಾಕ್ಸಮರ ಮುಂದುವರೆಯತ್ತಲೇ ಇದೆ. ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ನೀಡಿದ್ದ ಹೇಳಿಕೆ ಕುರಿತಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸ್ಪಷ್ಟನೆ ನೀಡುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ಸ್ಪಷ್ಟನೆ ಕೇಳಿದ್ದಾರೆ.

ಬಿಹಾರ ಚುನಾವಣೆ ಪ್ರಯುಕ್ತ ಇಂದು ಪಾಟ್ನದ ಲಕ್ಷಿಸರಾಯ್ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಲಾಲೂ ಹೇಳಿಕೆ ಕುರಿತಂತೆ ಈ ವರೆಗೂ ನಿತೀಶ್ ಕುಮಾರ್ ಆಗಲೀ ರಾಹುಲ್ ಗಾಂಧಿಯಾಗಲೀ ಸ್ಪಷ್ಟನೆ ನೀಡಿಲ್ಲ. ಈ ಮೌನಕ್ಕೆ ಕಾರಣವೇನು. ಮೊದಲು ಲಾಲೂ ಅವರ ಹೇಳಿಕೆ ವಿರುದ್ಧವೋ ಅಥವಾ ಪರವೋ ಎಂಬ ಕುರಿತಂತೆ ಬಹಿರಂಗ ಹೇಳಿಕೆ ನೀಡಿ ಎಂದು ಹೇಳಿದ್ದಾರೆ.

ಇದೇ ವೇಳೆ ಮೀಸಲಾತಿ ಕುರಿತಂತೆ ಆರ್ ಎಸ್ ಎಸ್ ವಿರುದ್ಧ ನಿತೀಸ್ ಹಾಗೂ ಲಾಲೂ ನೀಡಿದ್ದ ಹೇಳಿಕೆ ವಿರುದ್ಧ ಕಿಡಿಕಾರಿರುವ ಅವರು, ಜನರಲ್ಲಿ ಅಪನಂಬಿಕೆ ಹುಟ್ಟಿಸುವ ಕೆಲಸ ಮಾಡಬೇಡಿ. ಆರ್ ಎಸ್ಎಸ್ ಬಗ್ಗೆ ನನಗಿಂತ ಯಾರಿಗೆ ಗೊತ್ತು. ಉದ್ಯೋಗಕ್ಕೆ ಸಂಬಂಧಿಸಿದಂತಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿದ್ದಾರೆ.

ಮಿಸ್ಟರ್ ನಿತೀಶ್ ಕುಮಾರ್ ಹಾಗೂ ಮಿಸ್ಟರ್ ಲಾಲೂ ಪ್ರಸಾದ್ ಇಬ್ಬರೂ ಕೈ ಜೋಡಿಸಿದ್ದು ಬಿಹಾರ ರಾಜ್ಯ 25 ವರ್ಷದಿಂದ ಅಭಿವೃದ್ಧಿ ಕಾಣದಂತೆ ಮಾಡಿದ್ದಾರೆ. ಈಗಲೂ ಬಿಹಾರ ಜನತೆ ಶಿಕ್ಷಣಕ್ಕಾಗಿ ಇತರೆ ರಾಜ್ಯಗಳಿಗೆ ತೆರಳುವ ಪರಿಸ್ಥಿತಿ ಎದುರಾಗಿದೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುವ ಆಕಾಂಕ್ಷೆಯಲ್ಲಿದ್ದರು. ಈ ವೇಳೆ ಹಬ್ಬವನ್ನು ಆಚರಿಸಿದ್ದರು. ಪ್ರಧಾನಿಯಾಗುವ ಕನಸು ಕಾಣುತ್ತಿರುವ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು ಹೊರರಾಜ್ಯಗಳಾದ ಕರ್ನಾಟಕ ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಒಂದು ರಾಜ್ಯದಲ್ಲಾದರೂ ಅಧಿಕಾರದಲ್ಲಿದೆಯೇ ನಿತೀಶ್ ಪ್ರಧಾನಿಯಾಗಲು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com