ದಲಿತ ದಂಪತಿಯನ್ನು ಥಳಿಸಿ, ವಿವಸ್ತ್ರಗೊಳಿಸಿದ ಪೊಲೀಸರು!

ಗ್ರೇಟರ್ ನೋಯ್ಡಾದ ಗೌತಮ್ ಬುದ್ ನಗರದಲ್ಲಿ ಗುರುವಾರ ಪೊಲೀಸರು ದಲಿತ ದಂಪತಿಗಳನ್ನು ಥಳಿಸಿ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ...
ದಲಿತ ದಂಪತಿಯನ್ನು ವಿವಸ್ತ್ರಗೊಳಿಸಿರುವುದು (ಕೃಪೆ :ಫೇಸ್ ಬುಕ್ )
ದಲಿತ ದಂಪತಿಯನ್ನು ವಿವಸ್ತ್ರಗೊಳಿಸಿರುವುದು (ಕೃಪೆ :ಫೇಸ್ ಬುಕ್ )
ಉತ್ತರ ಪ್ರದೇಶ: ಗ್ರೇಟರ್ ನೋಯ್ಡಾದ ಗೌತಮ್ ಬುದ್ ನಗರದಲ್ಲಿ ಗುರುವಾರ ಪೊಲೀಸರು ದಲಿತ ದಂಪತಿಗಳನ್ನು ಥಳಿಸಿ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ ನಡೆದಿದೆ. 
ನಡೆದದ್ದೇನು?: ನೋಯ್ಡಾದ ಬಳಿ ಅಟ್ಟಾ ಎಂಬ ಪ್ರದೇಶದಲ್ಲಿ ಬುಧವಾರ ರಾತ್ರಿ ಮನೆಗೆ ಬರುತ್ತಿದ್ದ ವೇಳೆ ಸುನಿಲ್ ಗೌತಂ ಎಂಬಾತನನ್ನು ದರೋಡೆಕೋರರು ಲೂಟಿ ಮಾಡಿದ್ದರು. ದರೋಡೆ ನಡೆದಿರುವ ಬಗ್ಗೆ ಕೇಸು ದಾಖಲಿಸಲೆಂದು ಆತ ಗುರುವಾರ ಬೆಳಗ್ಗೆ ತನ್ನ ಮಗು ಮತ್ತು ಪತ್ನಿಯೊಂದಿಗೆ ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಗೆ ಹೋಗಿದ್ದಾನೆ .
ಆದರೆ ಕೇಸು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಪೊಲೀಸರ ಈ ನಿರಾಕರಣೆಗೆ ಸುನಿಲ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಸುನಿಲ್‌ನ ಪ್ರತಿಭಟನೆಯಿಂದ ಕೆರಳಿದ ಪೊಲೀಸರು ಆ ದಂಪತಿಗಳಿಗೆ ಹಿಗ್ಗಾಮುಗ್ಗ ಥಳಿಸಿ ವಿವಸ್ತ್ರಗೊಳಿಸಿದ್ದಾರೆ.
ಪೊಲೀಸರು ದಂಪತಿಗೆ ಥಳಿಸಿ ವಿವಸ್ತ್ರಗೊಳಿಸುತ್ತಿದ್ದಂತೆ ಅಲ್ಲಿಗೆ ಜನರ ಗುಂಪು ದೌಡಾಯಿಸಿದೆ. ಅಲ್ಲಿಯೂ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರು ದಲಿತ ದಂಪತಿಗಳ ಮೇಲೆ ದೌರ್ಜನ್ಯವೆಸಗುತ್ತಿರುವ ವೀಡಿಯೋ ಈಗ ಸೋಷ್ಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏತನ್ಮಧ್ಯೆ, ದಲಿತ ದಂಪತಿಗಳೇ ಈ ಘಟನೆಗೆ ಕಾರಣ, ಅವರು ಈ ವಿಷಯವನ್ನು ವೈಭವೀಕರಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com