ಗಲ್ಲುಶಿಕ್ಷೆ ಜೀವಾವಧಿಯಾಗಿದ್ದೇ ಹೆಚ್ಚು

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸುಮಾರು ಮೂರನೇ ಒಂದರಷ್ಟು ಕ್ಷಮಾದಾನ ಅರ್ಜಿಗಳನ್ನು ಪುರಸ್ಕರಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸುಮಾರು ಮೂರನೇ ಒಂದರಷ್ಟು ಕ್ಷಮಾದಾನ ಅರ್ಜಿಗಳನ್ನು ಪುರಸ್ಕರಿಸಿ, ಗಲ್ಲುಶಿಕ್ಷೆಯನ್ನು ಜೀವಾವಧಿಗಿಳಿಸಲಾಗಿದೆ. 
5,106 ಅರ್ಜಿಗಳ ಪೈಕಿ, 3534 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 1,572 ಮಂದಿಗೆ ಜೀವದಾನ ನೀಡಲಾಗಿದೆ. ಏಷ್ಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್(ಎಸಿಎಚ್ಆರ್) ತಯಾರಿಸಿದ ಭಾರತದಲ್ಲಿ ಕ್ಷಮಾದಾನ ಅರ್ಜಿಗಳ ಸ್ಥಿತಿಗತಿ ಎಂಬ ವರದಿಯು ಈ ವಿಚಾರಗಳನ್ನು ಬಹಿರಂಗಪಡಿಸಿದೆ. 
ಸಲ್ಲಿಕೆಯಾದ ಕ್ಷಮಾದಾನ ಅರ್ಜಿ ಗಳ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದೇ ವೇಳೆ, ಅರ್ಜಿಪರಿಶೀಲನೆ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗ ಳನ್ನು ಸರ್ಕಾರ ಹೊರಡಿಸಿದ್ದರೂ, 41 ಪ್ರಕರಣಗಳಲ್ಲಿ, ಮಾರ್ಗಸೂಚಿ ಉಲ್ಲಂಘಿಸಲಾಗಿದೆ. 
ಕೆಲವು ಪ್ರಕರಣ ಗಳಲ್ಲಿ ಸರ್ಕಾರವು, ಕೈದಿಯ ವೈದ್ಯ ಕೀಯ ದಾಖಲೆಗಳನ್ನು ಮರೆಮಾಚಿವೆ, ಮತ್ತೆ ಕೆಲವು ಕಡೆ ಅರ್ಜಿಗಳೇ ಕಳೆದುಹೋ ಗಿವೆ. ಇನ್ನು ಕೆಲ ಬಾರಿ ಜೈಲಲ್ಲೇ ಸಾವನ್ನಪ್ಪಿದವನ ಅರ್ಜಿಯನ್ನೂ ಸರ್ಕಾರ ರಾಷ್ಟ್ರಪತಿಗೆ ಕಳುಹಿಸಿಕೊಟ್ಟ ಉದಾಹರಣೆಗಳಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜೀವದಾನ
 5,106 1947ರಿಂದ 2015(5815)ರವರೆಗೆ ಗಲ್ಲುಶಿಕ್ಷೆಗೊಳಗಾದವರು ಸಲ್ಲಿಸಿದ ಕ್ಷಮಾದಾನ ಅರ್ಜಿಗಳು
 3,534 ತಿರಸ್ಕರಿಸಲಾದ ಕ್ಷಮಾದಾನ ಅರ್ಜಿಗಳು
 1,572 ಮರಣದಂಡನೆಯಿಂ ದ ಜೀವಾವಧಿಗಿಳಿಸಲಾ ದ ಪ್ರಕರಣಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com