ನವದೆಹಲಿ: ಅಲ್ಪಸ್ವಲ್ಪ ಕಾಮಗಾರಿ ಉಳಿದಿರುವ ಮತ್ತು ಸ್ಥಗಿತಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಏಕ ಕಂತಿನಲ್ಲಿ ಹಣಕಾಸಿನ ನೆರವು ಕಲ್ಪಿಸಲು ಹಣಕಾಸು ವ್ಯವಹಾರಗಳ ಮೇಲಿನ ಕೇಂದ್ರ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಇದಕ್ಕೆ ಹಣಕಾಸು ನೀಡುವ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಿರ್ಮಾಣ ಕಂಪನಿ ನಡುವೆ ಒಡಂಬಡಿಕೆ ಮಾಡಲಾಗುವುದು. ಯೂರಿಯಾ ಸಬ್ಸಿಡಿಗೆ ಸಮ್ಮತಿ: ಯೂರಿಯಾಗೆ ಸಹಾಯಧನ ನೀಡಲು ಕಳೆದ ವರ್ಷ ಬ್ಯಾಂಕ್ಗಳಿಂದ ಪಡೆದಿದ್ದ ರು.7,000 ಕೋಟಿ ಸಾಲ ಮರುಪಾವತಿಗೆ ಅನುಮೋದನೆ ನೀಡಿತು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
Advertisement