ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಶುಕ್ರವಾರ ಆಯೋಜಿಸಿರುವ ವಿಜಯದಶಮಿ ಉತ್ಸವವನ್ನು ಸತತ 2ನೇ ವರ್ಷವೂ ಸರಕಾರಿ ಸ್ವಾಮ್ಯದ ದೂರದರ್ಶನ ಸುದ್ದಿವಾಹಿನಿ ನೇರಪ್ರಸಾರ ಮಾಡಲಿದೆ.
ಈ ನಡುವೆ, ಸಮಾರಂಭದ ಮುಖ್ಯ ಅತಿಥಿಯಾಗಿ ಡಿಆರ್ಡಿಒ ಮಾಜಿ ಅಧ್ಯಕ್ಷ ಡಾ| ವಿ.ಕೆ. ಸಾರಸ್ವತ್ ಭಾಗವಹಿಸಲಿದ್ದಾರೆ. ಇಲ್ಲಿನ ಅಗ್ನೇಯ ಭಾಗದಲ್ಲಿರುವ ಮೈದಾನದಲ್ಲಿ ಸಮಾರಂಭ ನಡೆಯಲಿದ್ದು, ಇದರಲ್ಲಿ ಮೋಹನ್ ಭಾಗವತ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಕಳೆದ ವರ್ಷ ಆರ್ಎಸ್ಎಸ್ ನ ಖಾಸಗಿ ಕಾರ್ಯಕ್ರಮವನ್ನು ನೇರ ಪ್ರಸಾರವಾಗಿತ್ತು. ದೂರದರ್ಶನದ ಈ ಕಾರ್ಯ ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು.
Advertisement