ಎನ್ಎಸ್ ಸಿಎನ್(ಕೆ) ಉಗ್ರರ ಬಗ್ಗೆ ಮಾಹಿತಿ ನೀಡುವವರಿಗೆ 17 ಲಕ್ಷ ರು. ಬಹುಮಾನ: ಎನ್ಐಎ

ಎನ್.ಎಸ್.ಸಿ.ಎನ್(ಕೆ) ಗೆ ಸೇರಿದ ಇಬ್ಬರು ಪ್ರಮುಖ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾದಳ 17 ಲಕ್ಷ ರು ಬಹುಮಾನ ಘೋಷಿಸಿದೆ.
ಎನ್ಐಎ
ಎನ್ಐಎ
Updated on

ನವದೆಹಲಿ: ಎನ್ಎಸ್ ಸಿಎನ್(ಕೆ) ಗೆ ಸೇರಿದ ಇಬ್ಬರು ಪ್ರಮುಖ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾದಳ 17 ಲಕ್ಷ ರು ಬಹುಮಾನ ಘೋಷಿಸಿದೆ.

ಉಗ್ರ ಸಂಘಟನೆಯ ಅಧ್ಯಕ್ಷ ಶಂಗ್ವಾಂಗ್ ಶಂಗ್ಯುಂಗಿ ಖಪ್ಲಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 7 ಲಕ್ಷ ಹಾಗೂ ಮತ್ತೊಬ್ಬ ಉಗ್ರ ನಿಕಿ ಸುಮಿ ಬಗ್ಗೆ ಮಾಹಿತಿ ನೀದಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಹೇಳಿದೆ.

ಇಂದಿರಾ ಗಾಂಧಿ ಸ್ಟೇಡಿಯಂ ನಲ್ಲಿ ಅಸ್ಸಾಮ್ ರೈಫಲ್ಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಎನ್ಎಸ್ ಸಿಎನ್(ಕೆ) ಉಗ್ರ ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು. ಜೂನ್ 4 ರಂದು ಮಣಿಪುರದಲ್ಲಿ ದೋಗ್ರಾ ರೆಜಿಮೆಂಟ್ ಮೇಲೆ ನಡೆದ ದಾಳಿಯಲ್ಲೂ ಈ ಇಬ್ಬರು ಉಗ್ರರಿದ್ದರು ಎಂದು ಎನ್ಐಎ ತಿಳಿಸಿದೆ. ಉಗ್ರರ ಬಂಧನಕ್ಕೆ ಉಪಯುಕ್ತ ಮಾಹಿತಿ ನೀಡಿದವರಿಗೆ  17 ಲಕ್ಷ ರು ಬಹುಮಾನ ನೀಡುವುದಾಗಿ ಎನ್ಐಎ ತಿಳಿಸಿದೆ. ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು  ಗೌಪ್ಯವಾಗಿಡಲಾಗುವುದು ಎಂದು ಎನ್ಐಎ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com