ಅಮೃತಾಪುರಿ(ಕೊಲ್ಲಂ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ "ನಮಾಮಿ ಗಂಗೆ' ಯೋಜನೆಗೆ ಮಾತಾ ಅಮೃತಾನಂದ ಮಯಿ ಸ್ಥಾಪಿಸಿರುವ ಮಾತಾ ಅಮೃತಾನಂದಮಯಿ ಮಠವು 100 ಕೋಟಿ ರು. ದೇಣಿಗೆಯನ್ನು ನೀಡಿದೆ.
ಅಸಂಖ್ಯಾತ ಭಕ್ತರಿಂದ ಅಮ್ಮಾ ಎಂದೇ ಕರೆಯಲ್ಪಡುತ್ತಿರುವ ಮಾತಾ ಅಮೃತಾನಂದಮಯಿ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ನೂರು ಕೋಟಿ ರು.ಗಳ ಡ್ರಾಫ್ಟ್ ನೀಡಿದರು.
ಇವತ್ತು ನಮಗೆಲ್ಲರಿಗೂ ಅತ್ಯಂತ ಸ್ಮರಣೀಯ ದಿನವಾಗಿದೆ. ಮಾತಾ ಅಮೃತಾನಂದಮಯೀ ಅವರು ಪವಿತ್ರ ಗಂಗೆಯ ಶುದ್ಧೀಕರಣದ ಯೋಜನೆಯಾಗಿರುವ ನಮಾಮಿ ಗಂಗೆಯ ಯೋಜನೆಗೆ 100 ಕೋಟಿ ರುಪಾಯಿ ನೀಡಿದ್ದಾರೆ ಎಂದು ಸಚಿವ ಜೇಟ್ಲಿ ಅವರು ಅವರು ಹೇಳಿದ್ದಾರೆ.