ಡೆಂಗ್ಯೂ ನಿಂದ ಮಗ ಸಾವು: ನೊಂದ ಪೋಷಕರ ಆತ್ಮಹತ್ಯೆ

ಡೆಂಗ್ಯೂ ಜ್ವರದಿಂದ 7 ವರ್ಷದ ಮಗ ಸಾವನ್ನಪ್ಪಿದ್ದರಿಂದ ನೊಂದ ತಂದೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಡೆಂಗ್ಯೂ ಜ್ವರದಿಂದ 7 ವರ್ಷದ ಮಗ ಸಾವನ್ನಪ್ಪಿದ್ದರಿಂದ ನೊಂದ ತಂದೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.

ಒಡಿಸಾ ಮೂಲದ ಲಕ್ಷ್ಮಿ ಚಂದ್ರ ಮತ್ತು ಬಬಿತಾ ರೌಟ್ ಎಂಬುವರ ಪುತ್ರ ಅವಿನಾಶ್ ಶಂಕಿತ ಡೆಂಗ್ಯೂನಿಂದ ಸೆಪ್ಟಂಬರ್ 8ರಂದು ಮೃತ ಪಟ್ಟಿದ್ದಾನೆ. ಇದರಿಂದ ಮನನೊಂದ ದಂಪತಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾವು ಸಾಯುವ ಮುನ್ನ ಸೂಸೈಡ್ ನೋಟ್ ಬರೆದಿಟ್ಟು ತಮ್ಮ ಸಾವಿಗೆ ತಾವೇ ಕಾರಣ ಎಂದು ಒಡಿಯಾ ಭಾಷೆಯಲ್ಲಿ ಬರೆದಿಟ್ಟಿದ್ದಾರೆ.

ಸೆಪ್ಟಂಬರ್ 8 ರಂದು ದೆಹಲಿಯ ಎರಡು ಆಸ್ಪತ್ರೆಗಳಿಗೆ ತಮ್ಮ ಮಗನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎರಡು ಆಸ್ಪತ್ರೆಗಳಿಗೆ ನೊಟೀಸ್ ನೀಡಿದೆ. ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com