ನವದೆಹಲಿ: ಬಿಹಾರದಲ್ಲಿ ಜಂಗಲ್ ರಾಜ್ಯ ಇಲ್ಲ, ರಾಜಕೀಯ ಪಕ್ಷಗಳು ಮತದಾರರನ್ನು ಹಾದಿತಪ್ಪಿಸುತ್ತಿವೆ. ನಾವು ಆರ್ ಜೆಡಿ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಹಿಂದಿನ ಆಡಳಿತಕ್ಕೆ ಸಮೀಕರಿಸಲಾಗುತ್ತಿದೆ.
ಜಂಗಲ್ರಾಜ್ ಅನ್ನೋದೆಲ್ಲ ಬರೀ ಮಿಥ್ಯ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಕಾಂಗ್ರೆಸ್, ಆರ್ ಜೆಡಿ ನಮಗೆ ಬೆಂಬಲ ನೀಡುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದ ಕಾನೂನು ವ್ಯವಸ್ಥೆ ಅತ್ಯುತ್ತಮವಾಗಿದೆ ಎಂದೂ ಪ್ರತಿಪಾದಿಸಿದ್ದಾರೆ.
ಸಿಎನ್ಎನ್ ಐಬಿ ಎನ್ ಆಯೋಜಿಸಿದ್ದ ಸಂವಾದದಲ್ಲಿ ಅವರು, ರಾಜ್ಯದಲ್ಲಿ ಶುದ್ಧ ಕುಡಿಯುವ ನೀರು, ಶಿಕ್ಷಣ ದಂತಹ ಮೂಲ ಸೌಲಭ್ಯಗಳಿಗೆ ಒತ್ತು ನೀಡಬೇಕಿದೆ. ಮತ್ತೆ ಅಧಿಕಾರಕ್ಕೆ ಬಂದರೆ, ಕುಶಲ ತರಬೇತಿ, ಕಂಪ್ಯೂ ಟರ್ ಸಾಕ್ಷರತೆ, ಆಂಗ್ಲ ಭಾಷಾ ಜ್ಞಾನ, ತಾಂತ್ರಿಕ ಶಿಕ್ಷಣ, ವೈದ್ಯ ಕಾಲೇಜುಗಳ ನಿರ್ಮಾಣ, ಐಟಿಐ, ನರ್ಸಿಂಗ್ ಕಾಲೇಜು ಸ್ಥಾಪನೆಗೆ ಒತ್ತುಕೊಡುವುದಾಗಿ ಹೇಳಿದರು. ಇದೇ ವೇಳೆ, ಶನಿವಾರ ಎನ್ಡಿಎ ಸ್ಥಾನ ಹಂಚಿಕೆಗೆ ಬಿಹಾರದ ಮಾಜಿ ಸಿಎಂ ಜಿತನ್ ರಾಂ ಮಾಂಝಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement