ಡೆಂಘೀ ಜ್ವರಕ್ಕೆ ಯಾವುದೇ ಗಿಡಮೂಲಿಕೆಗಳನ್ನು ಬಳಸಬಾರದು. ಗಿಡಮೂಲಿಕೆಗಳಿಂದ ರೋಗ ಗುಣವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಆದ್ದರಿಂದ ಡೆಂಘೀ ಪೀಡಿತರು ಲೋಳೆಸರ, ಪಪ್ಪಾಯ ಎಲೆ ಮತ್ತು ಆಡಿನ ಹಾಲುಗಳನ್ನು ಬಳಸಿ ಎಂದು ನಾವು ಶಿಫಾರಸು ಮಾಡುವುದಿಲ್ಲ. ವೈಜ್ಞಾನಿಕ ಆಧಾರಗಳಿಲ್ಲದೆ ಯಾವುದೇ ಮದ್ದು ಸೇವಿಸಲು ಮುಂದಾಗಬೇಡಿ. ಕೆಲವೊಂದು ಹಣ್ಣುಗಳು, ಗಿಡಮೂಲಿಕೆಗಳು ಡೆಂಘೀಯನ್ನು ಗುಣಪಡಿಸುತ್ತವೆ ಎಂಬುದು ಇಲ್ಲಿಯವರೆಗೆ ವೈಜ್ಞಾನಿಕವಾಗಿ ಸಾಬೀತು ಪಡಿಸಿಲ್ಲ ಎಂದು ಏಮ್ಸ್ ನ ಮೆಡಿಸಿನ್ ವಿಭಾಗದ ಮುಖ್ಯಸ್ಥ ಎಸ್.ಕೆ ಶರ್ಮಾ ಹೇಳಿದ್ದಾರೆ.