ಬಿಹಾರ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ: ಪಕ್ಷದಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ

ಟಿಕೆಟ್‌ ಹಂಚಿಕೆ ವಿಷಯವಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಕ್ರಿಮಿನಲ್‌ಗಳಿಗೆ ಪಕ್ಷ ಟಿಕೆಟ್‌ ಮಾರಾಟ ಮಾಡುತ್ತಿದೆ ಎಂದು ....
ಆರ್.ಕೆ ಸಿಂಗ್
ಆರ್.ಕೆ ಸಿಂಗ್

ಪಾಟ್ನಾ:  ಟಿಕೆಟ್‌ ಹಂಚಿಕೆ ವಿಷಯವಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಕ್ರಿಮಿನಲ್‌ಗಳಿಗೆ ಪಕ್ಷ ಟಿಕೆಟ್‌ ಮಾರಾಟ ಮಾಡುತ್ತಿದೆ ಎಂದು ಬಿಹಾರದ ಸಂಸದ ಆರ್.ಕೆ. ಸಿಂಗ್‌ ಆರೋಪಿಸಿದ್ದಾರೆ.

'ಜನಪ್ರಿಯತೆಗಳಿಸಿರುವ ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಅಪರಾಧ ಹಿನ್ನೆಲೆಯವರಿಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಇಂಥ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಸಿಡಿದೇಳುವುದು ಸಹಜ,'ಎಂದು ಸಿಂಗ್‌ ಹೇಳಿದ್ದಾರೆ.

'ಕೆಟ್ಟ ರಾಜಕೀಯದಿಂದಾಗಿ ಬಿಹಾರದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ. ಆರ್‌ಜೆಡಿ ಹಾಗೂ ಜೆಡಿಯುದಿಂದ ಜಂಗಲ್‌ ರಾಜ್‌ ಪರಿಸ್ಥಿತಿ ಉಂಟಾಗಿದೆ ಎನ್ನುವ ಬಿಜೆಪಿ, ಕುಖ್ಯಾತರಿಗೆ ಟಿಕೆಟ್ ನೀಡುವ ಮೂಲಕ ನಿತೀಶ್‌-ಲಾಲು ಜೋಡಿಗಿಂತ ತಾನು ಬೇರೆ ಅಲ್ಲ ಎಂದು ತೋರಿಸಿದೆ,' ಎಂದು ಅವರು ಕಿಡಿಕಾರಿದ್ದಾರೆ.

'ಈ ವಿಷಯವನ್ನು ಪಕ್ಷದ ಹಿರಿಯ ನಾಯಕ ಸುಶೀಲ್‌ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಕ್ರಿಮಿನಲ್‌ಗಳಿಗೆ ಟಿಕೆಟ್‌ ನೀಡಿರುವ ಬಗ್ಗೆ ಪಕ್ಷ ಸಮಜಾಯಿಷಿ ನೀಡಬೇಕು,' ಎಂದು ಅವರು ಆಗ್ರಹಿಸಿದ್ದಾರೆ. .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com