ವಿಚಾರಣೆ ವೇಳೆ ಕಣ್ಣೀರಿಟ್ಟ ಸೋಮನಾಥ್ ಭಾರ್ತಿ

ಕೌಟುಂಬಿಕ ಹಿಂಸೆ, ಕೊಲೆ ಯತ್ನ ಪ್ರಕರಣದಡಿ ಬಂಧಿತರಾಗಿರುವ ದೆಹಲಿಯ ಮಾಜಿ ಕಾನೂನು ಸಚಿವ, ಆಪ್ ನಾಯಕ ಸೋಮನಾಥ್ ಭಾರ್ತಿ ವಿಚಾರಣೆ ವೇಳೆ ಕಣ್ಣೀರು...
ಸೋಮನಾಥ್ ಭಾರ್ತಿ
ಸೋಮನಾಥ್ ಭಾರ್ತಿ
Updated on

ನವದೆಹಲಿ: ಕೌಟುಂಬಿಕ ಹಿಂಸೆ, ಕೊಲೆ ಯತ್ನ ಪ್ರಕರಣದಡಿ ಬಂಧಿತರಾಗಿರುವ ದೆಹಲಿಯ ಮಾಜಿ ಕಾನೂನು ಸಚಿವ, ಆಪ್ ನಾಯಕ ಸೋಮನಾಥ್ ಭಾರ್ತಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಆಪ್ ಶಾಸಕ ಸೋಮನಾಥ್ ಭಾರ್ತಿ ಅವರನ್ನು ದ್ವಾರಕಾದಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ದು ತನಿಖಾಧಿಕಾರಿಗಳು ಪತ್ನಿ ಲಿಪಿಕಾ ಎದುರೇ ವಿಚಾರಣೆಗೆ ಒಳಪಡಿಸಿದರು. ಪತ್ನಿ ಆರೋಪಿಸಿರುವ ಹಲವು ವಿಚಾರಗಳ ಬಗ್ಗೆ ಪೊಲೀಸರು ಅವರನ್ನು ಪ್ರಶ್ನಿಸಿದರು. ಪತ್ನಿಯ ವಿರುದ್ಧ ಸಾಕು ನಾಯಿಯನ್ನು ಛೂಬಿಟ್ಟು ಕಚ್ಚಿಸಲು ಯತ್ನಿಸಿದ ಕುರಿತು ನೀವು ಅವರಿಗೆ ಇಷ್ಟೆಲ್ಲಾ ಹಿಂಸೆಯನ್ನು ಏಕೆ ನೀಡಿದಿರಿ ಪೊಲೀಸರು ಪ್ರಶ್ನಿಸಿದರು. ಈ ವೇಳೆ ದುಃಖದ ಕಟ್ಟೆ ಒಡೆದು ಭಾರ್ತಿ ಕಣ್ಣೀರು ಸುರಿಸಿದರು ಎಂದು ಹೇಳಲಾಗಿದೆ.

ಆರೆಸ್ಟ್  ವಾರಂಟ್ ಜಾರಿಯಾದ ಬಳಿಕ ಪೊಲೀಸರ ಕಣ್ತಪ್ಪಿಸಿಕೊಂಡು ಆಶ್ರಯ ಪಡೆದಿದ್ದ ಪ್ರದೇಶಗಳಿಗೆಲ್ಲ  ಸೋಮನಾಥ್ ಭಾರ್ತಿ ಅವರನ್ನು ಕರೆದೊಯ್ದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್  ಜಂಟಿ ಆಯುಕ್ತ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com