ಅನಂತಪುರ ಜಿಲ್ಲೆಯ ಕೊರಪ್ಪಡ ಹಳ್ಳಿಯವರಾದ ಪೊನ್ನಯ್ಯ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಅಪಘಾತದಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದರು. ತೀರಾ ಬಡತನ ಕುಟುಂಬದವರಾದ್ದರಿಂದ, ಪತ್ನಿ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗುವನ್ನು ಸಾಕುವುದು ಬಹಳ ಕಷ್ಟಕರವಾಗಿತ್ತು. ಈ ಹಿನ್ನಲೆಯಲ್ಲಿ ಪೊನ್ನಯ್ಯ ಭಿಕ್ಷೆ ಬೇಡಲು ಆರಂಭಿಸಿದರು. ತದ ನಂತರ ಪೊನ್ನಯ್ಯ ತನ್ನ ಅಣ್ಣ ತಮ್ಮಂದಿರಿಂದ ದೂರವಾಗಿದ್ದರು.