ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಹೋಗಿದ್ದ ಬಿಜೆಪಿ ಯುವ ಘಟಕ ನೇತಾರನ ಮೇಲೆ ಗುಂಡು

ಚತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಹೋಗಿದ್ದ ಬಿಜೆಪಿ ಯುವ ಘಟಕ ನೇತಾರನ ಮೇಲೆ ಗುಂಡಿನ ದಾಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಯ್ಪುರ್: ಚತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಹೋಗಿದ್ದ ಬಿಜೆಪಿ ಯುವ ಘಟಕ ನೇತಾರನ ಮೇಲೆ ಗುಂಡಿನ ದಾಳಿ ನಡೆದಿದೆ.
ಭಾನುವಾರ ಬೆಳಗ್ಗೆ ಸರಿಸುಮಾರು 8 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಗುಂಡಿನ ದಾಳಿಗೊಳಗಾದ ಬಿಜಾಪುರ್ ಜಿಲ್ಲೆಯ ಬಿಜೆವೈಎಂ ಅಧ್ಯಕ್ಷ ಮುರಳಿ ಕೃಷ್ಣ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಬಿಜಾಪುರ್ ಎಸ್ಪಿ ಕೆ.ಎಲ್ ಧ್ರುವ್ ಹೇಳಿದ್ದಾರೆ.
ದಾಳಿ ನಡೆಸಿದ್ದು ನಕ್ಸಲರು ಎಂದು ಶಂಕಿಸಲಾಗುತ್ತಿದೆ. ದುಷ್ಕರ್ಮಿಗಳು ದೇಸಿ ಗನ್ ಮತ್ತು ಹರಿತವಾದ ಆಯುಧಗಳಿಂದ ನಾಯ್ಡು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದುಷ್ಕರ್ಮಿಗಳು ಹಾರಿಸಿದ ಎರಡು ಗುಂಡು ನಾಯ್ಡು ಅವರ ಹೆಗಲಿಗೆ ಮತ್ತು ಸೊಂಟಕ್ಕೆ ತಾಗಿದೆ. ಆಮೇಲೆ ಅವರು ಇನ್ನಷ್ಟು ಹಲ್ಲೆ ನಡೆಸಲು ಮುಂದಾಗಿದ್ದು, ಕೂಡಲೇ ಅಲ್ಲಿದ್ದ ಜನ ನಾಯ್ಡು ಅವರನ್ನು ರಕ್ಷಣೆ ಮಾಡಿದ್ದಾರೆ. 
ಗಂಭೀರ ಗಾಯಗೊಳಗಾದ ನಾಯ್ಡು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com