ಮೊದಲ ಹಂತದ ಮತದಾನದ ಬಳಿಕ ತರುಣ್ ಗೊಗೊಯ್ ಮುಖದಲ್ಲಿ ನಗು ಕಣ್ಮರೆ: ಮೋದಿ

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ನಲ್ಲಿ ಮೊದಲ ಹಂತದ ಮತದಾನದ ಬಳಿಕ ತರುಣ್ ಗೊಗೊಯ್ ಮುಖದಲ್ಲಿ ನಗು ಕಣ್ಮರೆಯಾಗಿದೆ ಎಂದಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಅಸ್ಸಾಂ: ಅಸ್ಸಾಂ ವಿಧಾನಸಭಾ ಚುನಾವಣೆ ಅಂಗವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ನಲ್ಲಿ ಮೊದಲ ಹಂತದ ಮತದಾನದ ಬಳಿಕ ತರುಣ್ ಗೊಗೊಯ್  ಮುಖದಲ್ಲಿ ನಗು ಕಣ್ಮರೆಯಾಗಿದೆ ಎಂದಿದ್ದಾರೆ.
" ಏ.11 ರಂದು ಅಸ್ಸಾಂ ನಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು ಈ ಚುನಾವಣೆಯ ಸೋಲಿನಿಂದ ಪಕ್ಷವನ್ನು ಕಾಪಾಡಲು ಕಾಂಗ್ರೆಸ್ ಹೈಕಮಾಂಡ್ ಗೂ ಸಾಧ್ಯವಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣದಲ್ಲಿ ಮತಚಲಾವಣೆ ಮಾಡಿರುವ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ, ದಾಖಲೆ ಪ್ರಮಾಣದಲ್ಲಿ ಮತದಾನ ನಡೆದ ಬಳಿಕ ತರುಣ್ ಗೊಗೊಯ್ ಮುಖದಲ್ಲಿ ನಗು ಕಣ್ಮರೆಯಾಗಿರುವುದನ್ನು ನೀವು ಗಮನಿಸಿರುತ್ತೀರಿ, ಈಗ ಪಕ್ಷವನ್ನು ಉಳಿಸಲು ತರುಣ್ ಗೊಗೊಯ್, ದೆಹಲಿಯಿಂದ ಕಾಂಗ್ರೆಸ್ ನಾಯಕರನ್ನು ಕರೆಸುತ್ತಿದ್ದಾರೆ ಎಂದು ಮೋದಿ ಟೀಕಾಪ್ರಹಾರ ನಡೆಸಿದ್ದಾರೆ.
ದೆಹಲಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದ ಕಾಂಗ್ರೆಸ್ ನಾಯಕರು ಇನ್ನು ತರುಣ್ ಗೊಗೊಯ್ ಅವರನ್ನು ಹೇಗೆ ತಾನೇ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ದೇಶಕ್ಕಿಂತ ತಮ್ಮ ಮಗ, ಮಗಳ ಬಗ್ಗೆಯೇ ಹೆಚ್ಚು ಕಾಳಜಿ ಎಂದು ಮೋದಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com