ಹೈದರಾಬಾದ್ ಮೃಗಾಲಯದಿಂದ ಕರಡಿ ಪರಾರಿ

ಹೈದರಾಬಾದ್ ನೆಹರೂ ಝೂಲಾಜಿಕಲ್ ಪಾರ್ಕ್ ನಿಂದ ಕಳೆದ ರಾತ್ರಿ ಕರಡಿ ಪರಾರಿಯಾಗಿದ್ದು, ಬಹದೂರ್ ಪುರದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ...
ನೆಹರೂ ಝೂಲಾಜಿಕಲ್ ಪಾರ್ಕ್
ನೆಹರೂ ಝೂಲಾಜಿಕಲ್ ಪಾರ್ಕ್
Updated on

ಹೈದರಾಬಾದ್: ಹೈದರಾಬಾದ್ ನೆಹರೂ ಝೂಲಾಜಿಕಲ್ ಪಾರ್ಕ್ ನಿಂದ ಕಳೆದ ರಾತ್ರಿ ಕರಡಿ ಪರಾರಿಯಾಗಿದ್ದು, ಬಹದೂರ್ ಪುರದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಪಾರ್ಕ್ ನ ಆವರಣದಿಂದ ಕರಡಿ ಪರಾರಿಯಾಗುತ್ತಿದ್ದಂತೆ ಕರಡಿ ಮೇಲ್ವಿಚಾರಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ ಝೂನ ಅಧಿಕಾರಿಗಳು ಪಶುವೈದ್ಯರ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡಿದರು. ಕಳೆದ ರಾತ್ರಿಯಲ್ಲಾ ಕಾರ್ಯಾಚರಣೆ ನಡೆಸಿದರು ಕರಡಿ ಪತ್ತೆಯಾಗಿಲ್ಲ.

ಇಂತಹ ಪ್ರಕರಣಗಳು ತೀರ ಅಪರೂಪ. ಕಳೆದ ಆಗಸ್ಟ್ ನಲ್ಲಿ ಹುಲಿಯೊಂದು ಪರಾರಿಯಾಗಿತ್ತು. ಕೂಡಲೇ ಅಧಿಕಾರಿಗಳು ಝೂಗೆ ಭೇಟಿ ನೀಡಿದ್ದವರನ್ನು ಸ್ಥಳಾಂತರಿಸಿದ್ದರು. ನಂತರ ಹುಲಿಯನ್ನು ಸೆರೆ ಹಿಡಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com