ವಾಟ್ಸಾಪ್ ಗ್ರೂಪ್ ಹೆಸರು ಬದಲಾಯಿಸಿದ್ದಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

ವಾಟ್ಸಾಪ್ ಗ್ರೂಪ್ ನ ಹೆಸರು ಬದಲಾಯಿಸಿದ್ದಕ್ಕೆ ನಡೆದ ಹೊಡೆದಾಟದಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ವಾಟ್ಸಾಪ್
ವಾಟ್ಸಾಪ್

ಪುಣೆ: ವಾಟ್ಸಾಪ್ ಗ್ರೂಪ್ ನ ಹೆಸರು ಬದಲಾಯಿಸಿದ್ದಕ್ಕೆ ನಡೆದ ಹೊಡೆದಾಟದಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಪುಣೆಯ ಗಾರ್ವಾರೆ ಕಾಲೇಜಿನ ಶುಕ್ರವಾರ ಈ ಘಟನೆ ನಡೆದಿದೆ. ಜಗಳದಲ್ಲಿ  ಅಕ್ಷಯ್ ದಿನಕರ್ ಎಂಬಾತ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಿಬಿಎ ವಿದ್ಯಾರ್ಥಿ ಸಂಕೇತ್ ಸಾಲುಂಕೆ ಎಂಬಾತ ಪ್ರಕರಣ ದಾಖಲಿಸಿದ್ದಾನೆ.

ಗುರುವಾರ ಸಂಕೇತ್ ಸಾಲುಂಕೆ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪ್ ನ ಹೆಸರು ಬದಲಾಯಿಸಲಾಗಿತ್ತು. ಇದರಿಂದ ವಿದ್ಯಾರ್ಥಿಯೊಬ್ಬ ಗ್ರೂಪ್ ಹೆಸರು ಬದಲಿಸಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾನೆ. ಈ ವಿಚಾರವಾಗಿ ದೂರುದಾರ ಸಂಕೇತ್ ಸಾಲುಂಕೆ ಸ್ನೇಹಿತ ದಿನಕರ್ ಹಾಗೂ ಆರೋಪಿ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಮರುದಿನ ಬೆಳಗ್ಗೆ ಕಾಲೇಜಿನಲ್ಲಿ ಮುಖಾಮುಖಿಯಾದಾಗ ಇಬ್ಬರ ನಡುವೆ ಜಗಳ ನಡೆದಿದೆ. ಆರೋಪಿ ವಿದ್ಯಾರ್ಥಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮರದ ವಸ್ತುಗಳಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅಕ್ಷಯ್ ದಿನಕರ್ ಈಗ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಈ ಸಂಬಂಧ 22 ಮಂದಿ ವಿರುದ್ಧ ಕೇಸು ದಾಖಲಾಗಿದ್ದು, 5 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com