
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮುಂಬರುವ ವಿಧಾನಸಭಾ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದರು.
ಜಯಲಲಿತಾ ಅವರು ಆರ್ ಕೆ ನಗರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಅವರು ಆ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ.
ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಇಂದು ತಿರುವರೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಜಯಲಲಿತಾ ಅವರಿಗೆ ಸಾವಿರಾರು ಮಂದಿ ಶುಭ ಹಾರೈಸಿದರೆ, ಕರುಣಾನಿಧಿಗೆ ಡಿಎಂಕೆ ನಾಯಕರು ಸಾಥ್ ಕೊಟ್ಟಿದ್ದರು. ಜಯಾ ಅವರು ತಮ್ಮ ಆಪ್ತ ಗೆಳತಿ ಶಶಿಕಲಾ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು.
ಮೇ 16ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಸುಮಾರು 5.6 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ, ಪ್ರತಿಪಕ್ಷವಾದ ಡಿಎಂಕೆ, ಡಿಎಂಡಿಕೆ, ಪಿಡಬ್ಲ್ಯುಎಫ್, ಟಿಎಂಸಿ, ಪಿಎಂಕೆ, ಬಿಜೆಪಿ ಮೈತ್ರಿಕೂಟದ ನಡುವೆ ಹಣಾಹಣಿ ನಡೆಯಲಿದೆ.
Advertisement