ದೆಹಲಿ ಸರ್ಕಾರ ಸಮ-ಬೆಸ ಯೋಜನೆಯಿಂದ ಸಂಸದರಿಗೆ ತೊಂದರೆಯಾಗದಿರಲಿ ಎಂದು ಹವಾನಿಯಂತ್ರಿತ ಬಸ್ಗಳ ವ್ಯವಸ್ಥೆ ಮಾಡಿದೆ. ಆದರೆ ಮೊದಲ ದಿನವೇ ಸಂಸದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಬಸ್ ಸೇವೆಯನ್ನು ದೆಹಲಿ ಸರ್ಕಾರ ಹಿಂಪಡೆದಿತ್ತು. ಉತ್ತರ ಪ್ರದೇಶದ ಹದೋಯ್ನ ಸಂಸದ ಅನ್ಶುಲ್ ವರ್ಮಾ ಮಾತ್ರ ಬಸ್ನಲ್ಲಿ ಸಂಚರಿಸಿದ್ದರು. ಅನ್ಶುಲ್ ದೆಹಲಿ ಸರ್ಕಾರ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಬಸ್ನಲ್ಲಿ ಸಂಸತ್ತಿಗೆ ಆಗಮಿಸುತ್ತಿದ್ದೇನೆ ಎಂದು ತಿಳಿಸಿದ್ದರು.