ಉತ್ತರಾಖಂಡ್ ನಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಎನ್ ಡಿ ಆರ್ ಎಫ್ ತಂಡ ಹರಸಾಹಸ

ಉತ್ತರಾಖಂಡದ 13 ಜಿಲ್ಲೆಗಳಲ್ಲಿ 1900 ಹೆಕ್ಟೇರ್​ಗೂ ಹೆಚ್ಚಿನ ಕಾಡನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಲು 3 ಎನ್​ಡಿಆರ್​ಎಫ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಡೆಹರಾಡೂನ್: ಉತ್ತರಾಖಂಡದ 13 ಜಿಲ್ಲೆಗಳಲ್ಲಿ 1900 ಹೆಕ್ಟೇರ್​ಗೂ ಹೆಚ್ಚಿನ ಕಾಡನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಲು 3 ಎನ್​ಡಿಆರ್​ಎಫ್ ತಂಡವನ್ನು ನಿಯೋಜಿಸಲಾಗಿದೆ.

ಬೆಂಕಿಯನ್ನು ನಿಯಂತ್ರಣಕ್ಕೆ ತರಲು 135 ತಜ್ಞರ ತಂಡ ಹರಸಾಹಸ ಪಡುತ್ತಿದೆ. ಎನ್​ಡಿಆರ್​ಎಫ್ ತಂಡ ನೀರಿನ ಟ್ಯಾಂಕರ್​ಗಳು, ಪಂಪ್​ಗಳು ಮತ್ತು ಅಗತ್ಯ ಔಷಧಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದೆ.

ಎನ್​ಡಿಆರ್​ಎಫ್ ತಂಡ ಅಲ್ಮೋರಾ, ಪೌರಿ, ಗಾಚರ್​ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಎನ್​ಡಿಆರ್​ಎಫ್​ನ ಮಹಾನಿರ್ದೇಶಕ ಓಪಿ ಸಿಂಗ್ ತಿಳಿಸಿದ್ದಾರೆ. ಶುಷ್ಕ ವಾತಾವರಣ, ಹೆಚ್ಚಾದ ತಾಪಮಾನ ಮತ್ತು ಅತಿಯಾದ ಗಾಳಿಯಿಂದಾಗಿ ಬೆಂಕಿ ಹತೋಟಿ ಮೀರಿ ಹಬ್ಬುತ್ತಿದೆ. ಜತೆಗೆ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಎನ್​ಡಿಆರ್​ಎಫ್ ತಂಡ ತಿಳಿಸಿದೆ.

ರಕ್ಷಿತಾರಣ್ಯಗಳಿಗೂ ಬೆಂಕಿ ಹಬ್ಬಿದೆ. ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್​ನ 198 ಹೆಕ್ಟೇರ್ ಕಾಡು ಬೆಂಕಿಗೆ ನಾಶವಾಗಿದೆ. ಜತೆಗೆ ರಾಜಾಜಿ ಹುಲಿ ಸಂರಕ್ಷಿತ ಅರಣ್ಯದಲ್ಲಿ 70 ಹೆಕ್ಟೇರ್ ಮತ್ತು ಕೇದಾರ್​ನಾಥ್ ಮಸ್ಕ್ ಡೀರ್ ಸ್ಯಾಂಚುರಿನಲ್ಲಿ 60 ಹೆಕ್ಟೇರ್ ಅರಣ್ಯ ಕಾಡ್ಗಿಚ್ಚಿಗೆ ಬಲಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com