ಬುಲಂದ್ ಶರ್ ಸಾಮೂಹಿಕ ಅತ್ಯಾಚಾರ: ಅಜಂಖಾನ್ ಅಸಂಬದ್ಧ ಹೇಳಿಕೆಗೆ ವ್ಯಾಪಕ ಟೀಕೆ

ಉತ್ತರ ಪ್ರದೇಶದ ಬುಲಂದ್ ರ್ಶಾ ನಲ್ಲಿ ತಾಯಿ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಂಖಾನ್ ಅಸಂಬದ್ಧ ...
ಅಜಂಖಾನ್
ಅಜಂಖಾನ್
Updated on

ಬುಲಂದ್ ಶರ್: ಉತ್ತರ ಪ್ರದೇಶದ ಬುಲಂದ್ ರ್ಶಾ ನಲ್ಲಿ ತಾಯಿ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಂಖಾನ್ ಅಸಂಬದ್ಧ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಸಾಮೂಹಿಕ ಅತ್ಯಾಚಾರ ರಾಜಕೀಯ ಪಿತೂರಿ ಎಂದು ಹೇಳುವ ಮೂಲಕ ಅಜಂಖಾನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದೆ, ಹತಾಶಗೊಂಡಿರುವ ವಿರೋಧ ಪಕ್ಷಗಳು ಆಡಳಿತ ಪಕ್ಷಕ್ಕೆ ಕೆಟ್ಟ ಹೆಸರು ತರಲು, ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ವಿರೋಧಪಕ್ಷಗಳು ಯಾವ ಹಂತಕ್ಕಾದರೂ ಇಳಿಯುತ್ತವೆ ಎಂದು ಅಜಂ ಖಾನ್ ಆರೋಪಿಸಿದ್ದಾರೆ. ಇದರಲ್ಲಿ ವಿರೋಧ ಪಕ್ಷಗಳ ಕೈವಾಡವಿರುವುದರಿಂದ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಅಜಂಖಾನ್ ಹೇಳಿಕೆಗೆ ತೀವ್ರ ಅಕ್ರೋಶ ವ್ಯಕ್ತ ಪಡಿಸಿರುವ ಬಾಲಕಿಯ ತಂದೆ, ಒಂದು ವೇಳೆ ಅಜಂ ಖಾನ್ ಅವರ ಕುಟುಂಬಸ್ಥರಿಗೆ ಈ ರೀತಿ ಅನ್ಯಾಯವಾಗಿದ್ದರೇ ಆ ಸಂದರ್ಭದಲ್ಲೂ ಅಜಂಖಾನ್ ಹೀಗೆ ಹೇಳಿಕೆ ನೀಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com