ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿನ ಅನಿಶ್ಚಿತತೆ, ಅಶಾಂತಿಗಳಿಗೆ ಕೊನೆ ಹಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಸರ್ವಪಕ್ಷ ಸಭೆ ಕರೆದಿದ್ದರು.ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತ್ಯೇಕತಾವಾದಿ ಗುಂಪಿನ ಮುಖಂಡರು, ಕಾಶ್ಮೀರ ಸಮಸ್ಯೆ ಒಂದು ಆಂತರಿಕ ವಿಷಯ ಎಂದು ಎಲ್ಲಿಯವರೆಗೆ ಭಾರತದ ರಾಜಕೀಯ ನಾಯಕರು ಯೋಚಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದರು.