ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಅಸ್ವಸ್ಥರಾದ ಹರ್ಯಾಣ ರಾಜ್ಯಪಾಲ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯುತ್ತಿದ್ದ ಪರೇಡ್ ನಲ್ಲಿ ಹರ್ಯಾಣದ ರಾಜ್ಯಪಾಲ ಕಪ್ತಾನ್ ಸಿಂಗ್ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ.
ಹರ್ಯಾಣ ರಾಜ್ಯಪಾಲ
ಹರ್ಯಾಣ ರಾಜ್ಯಪಾಲ

ಚಂಡೀಗಢ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯುತ್ತಿದ್ದ ಪರೇಡ್ ನಲ್ಲಿ ಹರ್ಯಾಣದ ರಾಜ್ಯಪಾಲ ಕಪ್ತಾನ್ ಸಿಂಗ್ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ.

ತಾಪಮಾನ ಹೆಚ್ಚಿದ್ದ ಕಾರಣ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ  ಕಪ್ತಾನ್ ಸಿಂಗ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಭಾಷಣ ಮಾಡುತ್ತಿದ್ದ ರಾಜ್ಯಪಾಲರು ಏಕಾಏಕಿ ಸ್ಥಬ್ದರಾದರು, ನಂತರ ಅವರನ್ನು ಚೇರ್ ಮೇಲೆ ಕೂರಿಸಿ ನೀರು ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com