ಗುಂಟೂರಿನಲ್ಲಿ ರಸ್ತೆ ಅಪಘಾತ; 3 ಸಾವು, 15 ಮಂದಿಗೆ ಗಾಯ

ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಟ ಮೂವರು ಮೃತಪಟ್ಟು, 15 ಮಂದಿ ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಗುಂಟೂರು: ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಟ ಮೂವರು ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಿದುಗುರಲ್ಲಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ. ಖಾಸಗಿ ಬಸ್ಸು ನಿಲ್ಲಿಸಿದ್ದ ಲಾರಿಗೆ ಹೋಗಿ ಗುದ್ದಿ ಈ ಅವಘಡ ಸಂಭವಿಸಿದೆ. 
ವಿನಾಯಕ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ಸು ಹೈದರಾಬಾದ್ ನಿಂದ ನೆಲ್ಲೂರು ಕಡೆಗೆ ಹೋಗುತ್ತಿತ್ತು. ಅಷ್ಟು ದೂರದ ಪ್ರಯಾಣವಾದರೂ ಕೂಡ ಇದ್ದದು ಒಬ್ಬರೇ ಚಾಲಕ. ರಾತ್ರಿ ಪ್ರಯಾಣವಾಗಿದ್ದರಿಂದ ಚಾಲಕ ನಸುಕಿನ ಜಾವ ನಿದ್ದೆಗೆ ಜಾರಿ ಚಾಲನೆಯಲ್ಲಿ ನಿಯಂತ್ರಣ ತಪ್ಪಿರಬೇಕು. ಮಧ್ಯರಾತ್ರಿಯಾದ ನಂತರ ಬಸ್ಸು ಓಡಿಸುವಾಗ ನಿದ್ದೆ ಬಾರದಂತೆ ತಡೆಯಲು ಎರಡು ಸಾರಿ ಬಸ್ಸನ್ನು ನಿಲ್ಲಿಸಿ ಟೀ ಕುಡಿದಿದ್ದನಂತೆ. ಆದರೆ ಸ್ವಲ್ಪ ಮುಂದೆ ಹೋದಾಗ ನಿಯಂತ್ರಣ ಕಳೆದುಕೊಂಡು ಲಾರಿಗೆ ಗುದ್ದಿದ್ದಾನೆ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಹೇಳಿದ್ದಾರೆ.
ಅಪಘಾತ ನಡೆದ ಕೂಡಲೇ ಚಾಲಕ ಬಸ್ಸು ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲಿದ್ದ ದಾರಿಹೋಕರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ನಂತರ ಗಾಯಗೊಂಡವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಸಾವಿಗೀಡಾದವರ ಗುರುತಿಗಾಗಿ ಪ್ರಯತ್ನಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com